ಅಬಕಾರಿ ನೀತಿ ಹಗರಣ ಕುರಿತ ವೀಡಿಯೋವನ್ನು ಸಿಬಿಐಗೆ ಹಸ್ತಾಂತರಿಸಲಿ: ಆಮ್ ಆದ್ಮಿ ಆಗ್ರಹ

Prasthutha|

ನವದೆಹಲಿ: ದೆಹಲಿ ಸರ್ಕಾರದ ಮದ್ಯ ನೀತಿ ಹಗರಣದ ಕುರಿತು ಬಿಜೆಪಿ ರಹಸ್ಯ ಕಾರ್ಯಾಚರಣೆ ನಡೆಸಿದೆ ಎನ್ನಲಾದ ವೀಡಿಯೋವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆಗ್ರಹಿಸಿದ್ದಾರೆ.

- Advertisement -

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಮನೆ ಮತ್ತು ಬ್ಯಾಂಕ್ ಲಾಕರ್ ಮೇಲೆ ದಾಳಿ ನಡೆಸಿದ ಬಳಿಕ ಬಿಜೆಪಿಗೆ ಏನೂ ಸಿಗಲಿಲ್ಲ ಎಂದು ತಿಳಿಸಿದ್ದಾರೆ. ಈ ವೀಡಿಯೋವನ್ನು ತಕ್ಷಣ ಸಿಬಿಐಗೆ ನೀಡಬೇಕು ಎಂದು ಅವರು ಬಿಜೆಪಿಯನ್ನು ಆಗ್ರಹಿಸಿದರು.

ಈ ವೀಡಿಯೋದ ಸತ್ಯಾಂಶವನ್ನು ಸಿಬಿಐ ತನಿಖೆ ಮಾಡಲಿ, ಇದರಲ್ಲಿ ನನ್ನ ತಪ್ಪು ಕಂಡುಬಂದರೆ ನನ್ನನ್ನು ಬಂಧಿಸಲಿ ಎಂದು ಬಿಜೆಪಿಗೆ ಸವಾಲೆಸೆದರು.

- Advertisement -

ಕುಟುಕು ಕಾರ್ಯಾಚರಣೆಯ ವೀಡಿಯೋ ನನ್ನ ವಿರುದ್ಧ ಪ್ರಧಾನಿ ಕಾರ್ಯಾಲಯದ ಮತ್ತೊಂದು ಷಡ್ಯಂತ್ರ ಎಂದು ಅವರು ಆರೋಪಿಸಿದ್ದಾರೆ.



Join Whatsapp