ಮರಳುಗಾರಿಕೆಗೆ ಕಣ್ಗಾವಲಿಟ್ಟ ಸಿಸಿಟಿವಿ ಒಡೆದ ಪ್ರಕರಣ: ನಾಲ್ವರ ಬಂಧನ- ಲಾರಿ ವಶಕ್ಕೆ

Prasthutha|

ಉಳ್ಳಾಲ: ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಳವಡಿಸಲಾಗಿದ್ದ ಸಿಸಿಟಿಯನ್ನು ಲಾರಿ ಹಾಯಿಸಿ ಒಡೆದು ಹಾಕಿದ ಪ್ರಕರಣ ಸಂಬಂಧ ಉಳ್ಳಾಲ‌ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

- Advertisement -

ಉಳ್ಳಾಲದ ಸೋಮೇಶ್ವರ ಗ್ರಾಮದ ಸೋಮನಾಥೇಶ್ವರ ದೇವಸ್ಥಾನದ ಬಳಿಯಲ್ಲಿ ಅನಧಿಕೃತ ಮರಳುಗಾರಿಕೆಯನ್ನು ತಡೆಯುವ ಸಲುವಾಗಿ ಸಿಸಿಟಿವಿ ಅಳವಡಿಸಲಾಗಿತ್ತು. ಆದರೆ ಈ ಸಿಸಿಟಿವಿಯನ್ನು ಸೆಪ್ಟಂಬರ್ 10ರಂದು ಲಾರಿ ಢಿಕ್ಕಿ ಹೊಡೆಸಿ ಒಡೆದು ಹಾಕಲಾಗಿತ್ತು.

ಉಳ್ಳಾಲ ತಾಲೂಕು ಕಂದಾಯ ನಿರೀಕ್ಷಕರ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ಸೂರಜ್, ಇಕ್ಬಾಲ್, ಅಖಿಲ್ ಮತ್ತು ಪ್ರಜ್ವಲ್ ಎಂಬವರನ್ನು ಬಂಧಿಸಿದ್ದು, ಕೃತ್ಯ ನಡೆಸಲು ಬಳಸಿದ ಲಾರಿಯನ್ನೂ ಸೀಝ್ ಮಾಡಿದ್ದಾರೆ.



Join Whatsapp