ದೇವರಿಗೆ ಅರ್ಪಿಸಿದ ಬಾದಾಮಿ ಕಳ್ಳತನದ ಆರೋಪ: 11 ಹರೆಯದ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿದ ದುಷ್ಕರ್ಮಿಗಳು

Prasthutha|

ಭೋಪಾಲ್: ದೇವರಿಗೆ ಅರ್ಪಿಸಿದ ಬಾದಾಮಿಯನ್ನು ಕಳ್ಳತನ ಮಾಡಿ ತಿಂದ ಆರೋಪ ಹೊರಿಸಿ 11 ವರ್ಷದ ಬಾಲಕನನ್ನು ದೇವಸ್ಥಾನದ ಆರ್ಚಕ ಮತ್ತು ಮತ್ತೊಬ್ಬ ಯುವಕ ಮರವೊಂದಕ್ಕೆ ಕಟ್ಟಿ ಹಾಕಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಿಂದ ವರದಿಯಾಗಿದೆ.

- Advertisement -

ಸಿದ್ಧಯತನ್ ಜೈನ್ ದೇವಸ್ಥಾನದಲ್ಲಿ ದೇವರಿಗೆ ಅರ್ಪಿಸಿದ ಬಾದಾಮಿಯನ್ನು ತಿಂದ ಆರೋಪ ಹೊರಿಸಿ ಅರ್ಚಕನೊಬ್ಬ 11 ವರ್ಷದ ಬಾಲಕನನ್ನು ಸಮೀಪದಲ್ಲಿದ್ದ ಮರಕ್ಕೆ ಹಗ್ಗದಿಂದ ಕಟ್ಟಿ ಹಾಕಿದ್ದಾನೆ.

ಈ ಕುರಿತು ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತನ್ನನ್ನು ಬಿಟ್ಟುಬಿಡುವಂತೆ ಸಂತ್ರಸ್ತ ಬಾಲಕ ಅಂಗಲಾಚಿಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಅರ್ಚಕನ ಈ ರೀತಿಯ ಅಮಾನವೀಯ ನಡೆಗೆ ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

- Advertisement -

ಸದ್ಯ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕನ ತಂದೆ ನೀಡಿದ ದೂರಿನನ್ವಯ ಪೊಲೀಸರು, ಐಪಿಸಿ ಮತ್ತು ಎಸ್.ಸಿ/ಎಸ್.ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.



Join Whatsapp