ಗೋಣಿಚೀಲದಲ್ಲೂ ಗೋಲ್ಮಾಲ್; ಬೊಮ್ಮಾಯಿಯ ಬೊಗಳೆ ಸರ್ಕಾರ: ರಣದೀಪ್ ಸುರ್ಜೇವಾಲ

Prasthutha|

ಬೆಂಗಳೂರು: ಬಿಜೆಪಿಯು ಭ್ರಷ್ಟಾಚಾರದ ಬ್ರಹ್ಮಾಂಡ ಕೂಪವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಟೀಕಿಸಿದ್ದಾರೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 40% ಕಮಿಷನ್ ಸರ್ಕಾರದ ಆಹಾರ ಸರಬರಾಜು ಇಲಾಖೆ ಗೋಣಿಚೀಲದಲ್ಲೂ ಗೋಲ್ಮಾಲ್ ನಡೆಸಿದೆ. ಈ ಸರ್ಕಾರದ ಪ್ರತಿ ಇಲಾಖೆಯೂ ಬ್ರಹ್ಮಾಂಡ ಭ್ರಷ್ಟಾಚಾರದ ಕೂಪವಾಗಿರೋದು ಮುಚ್ಚಿಡುವಂಥದ್ದೇನಲ್ಲ ಎಂದು ಹೇಳಿದ್ದಾರೆ.


ರೈತರ ಆದಾಯ ದ್ವಿಗುಣ ಮಾಡುತ್ತೇವೆಂದು ಬೊಗಳೆ ಬಿಟ್ಟ ಬೊಮ್ಮಾಯಿ ಅವರ ಮಾನಗೆಟ್ಟ ಸರ್ಕಾರ ರೈತರ ಹೆಸರು ಹೇಳಿಕೊಂಡು ಗೋಣಿ ಚೀಲದಲ್ಲೂ ಅಕ್ರಮವೆಸಗಿ ಇತಿಹಾಸ ಬರೆದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.



Join Whatsapp