ಬಿಜೆಪಿ ಬೆದರಿಕೆಗೆ NCP ತಲೆ ಬಾಗುವುದಿಲ್ಲ: ಶರದ್ ಪವಾರ್

Prasthutha|

ನವದೆಹಲಿ: ದೆಹಲಿಯನ್ನು ಆಳುವವರಿಗೆ NCP ತಲೆ ಬಾಗುವುದಿಲ್ಲ ಎಂದು ಗುಡುಗಿದ ಪಕ್ಷದ ಮುಖ್ಯಸ್ಥ ಶರದ್ ಪವಾರ್, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

- Advertisement -

NCP ಪಕ್ಷದ ರಾಷ್ಟೀಯ ಕಾರ್ಯಕಾರಿಣಿ ಸಭೆಯ ಬಳಿಕ ಮಾತನಾಡಿದ ಅವರು, ಹಲವು ವಿಪಕ್ಷ ಮುಖಂಡರು ತನಿಖಾ ಸಂಸ್ಥೆಗಳ ಕಣ್ಗಾವಲಿನಲ್ಲಿದ್ದಾರೆ ಎಂದು ತಿಳಿಸಿದರು.

ದೇಶದಲ್ಲಿ ಉಂಟಾಗಿರುವ ಹಣದುಬ್ಬರ, ನಿರುದ್ಯೋಗ, ರೈತಾಪಿ ವರ್ಗದ ಪ್ರತಿಭಟನೆ, ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದ್ವೇಷ ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ಸರ್ಕಾರವನ್ನು ಶರದ್ ಪವಾರ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.



Join Whatsapp