ಸಾಲಿಡಾರಿಟಿ ರಾಜ್ಯ ಸಮ್ಮೇಳನದ ಘೋಷಣಾ ಸಮಾವೇಶ, ಪೋಸ್ಟರ್ ಬಿಡುಗಡೆ

Prasthutha|

ಬೆಂಗಳೂರು: ಡಿಸೆಂಬರ್ 18ರಂದು ಬೆಂಗಳೂರಿನ ಖುದ್ದೂಸ್ ಸಾಹೇಬ್ ಮೈದಾನದಲ್ಲಿ ನಡೆಯಲಿರುವ ಸಾಲಿಡಾರಿಟಿ ಯೂತ್ ಮೂವ್’ಮೆಂಟ್ ರಾಜ್ಯ ಮಟ್ಟದ ಸಮ್ಮೇಳನದ ‘ಘೋಷಣಾ ಸಮಾವೇಶ ಹಾಗೂ ಪೋಸ್ಟರ್ ಬಿಡುಗಡೆ’ ಸಮಾರಂಭವು ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಮಸ್ಜಿದೆ ಆಲಾದಲ್ಲಿ ನಡೆಯಿತು.

- Advertisement -

ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಮುಹಮ್ಮದ್ ಸಾದ್ ಬೆಳಗಾಮಿಯವರು ಸಮ್ಮೇಳನದ ಘೋಷವಾಕ್ಯ ಮತ್ತು ಪೋಸ್ಟರನ್ನು ಬಿಡುಗಡೆಗೊಳಿಸಿದರು.

 ‘ಭರವಸೆ- ಮರುನಿರ್ಮಾಣ- ಘನತೆ’ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಲಿರುವ ಈ ಏಕದಿನ ಸಮ್ಮೇಳನದ ಪೂರ್ವದಲ್ಲಿ ರಾಜ್ಯಾದ್ಯಂತ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ.

- Advertisement -

ಕಾರ್ಯಕ್ರಮದಲ್ಲಿ ಸಾಲಿಡಾರಿಟಿ ರಾಜ್ಯಾಧ್ಯಕ್ಷ ಲಬೀದ್ ಶಾಫಿ ಆಲಿಯಾ, ಮೌ| ಫಾರೂಕ್ ಫೌಝಾನ್ ರಶಾದಿ, ಜಮಾಅತೆ ಇಸ್ಲಾಮೀ ಹಿಂದ್ ಬೆಂಗಳೂರು ಮೆಟ್ರೋ ಸಂಚಾಲಕ ಪ್ರೊ. ಹಾರೂನ್ ಸಫ್ದರ್, ಸ್ಥಾನೀಯ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಸಾಲಿಡಾರಿಟಿ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ರಿಹಾನ್, ಸಾಲಿಡಾರಿಟಿ ಕಾರ್ಯಕಾರಿಣಿ ಸಮಿತಿ ಸದಸ್ಯ ಮಾಝ್ ಮನಿಯಾರ್ ಉಪಸ್ಥಿತರಿದ್ದರು.



Join Whatsapp