ಬಸ್ಸಿನಲ್ಲಿ ಪ್ರತ್ಯಕ್ಷಗೊಂಡ ಸರ್ಪ; ಅಪಾಯದಿಂದ ಪಾರಾದ ಡ್ರೈವರ್,ಪ್ರಯಾಣಿಕರು

Prasthutha|

ಚಿಕ್ಕಮಗಳೂರು: ಶೃಂಗೇರಿ ಬಸ್‌ ನಿಲ್ದಾಣದಿಂದ ಹೊರಟಿದ್ದ ಕೆಎಸ್ಆರ್ ಟಿ ಸಿ ಬಸ್ಸೊಂದು, ಕೊಪ್ಪ ತಾಲ್ಲೂಕಿನ ಜಯಪುರದ ಗ್ರಾಮದ ಬಳಿ ಹೋಗುತ್ತಿರುವಾಗ, ಸರ್ಪವೊಂದು ಕಾಣಿಸಿಕೊಂಡಿದೆ.

- Advertisement -


ಬ್ರೇಕ್ ಹಾಕುವ ವೇಳೆ ಬುಸುಗುಡುವ ಶಬ್ಧ ಕೇಳಿ ಕೆಳಕ್ಕೆ ನೋಡಿದಾಗ ಸರ್ಪವನ್ನು ಕಂಡು ಹೌಹಾರಿದ ಡ್ರೈವರ್ ಸಡನ್ ಆಗಿ ಬಸ್ ಅನ್ನು ರಸ್ತೆ ಬದಿಗೆ ತಂದು ನಿಲ್ಲಿಸಿ ಅಲ್ಲಿಂದ ಪಾರಾಗಿದ್ದಾರೆ.


ಸರ್ಪ ಹೋಗುವವರೆಗೂ ಡ್ರೈವರ್ ಹಾಗೂ ಪ್ರಯಾಣಿಕರು ಕಾದಿದ್ದಾರೆ. ಕೆಲಕಾಲ ಬುಸುಗುಡುತ್ತಿದ್ದ ಸರ್ಪ, ನಂತರ ಅಲ್ಲಿಂದ ಹೋಗಿದೆ . ಅದೃಷ್ಟಕ್ಕೆ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯವುಂಟಾಗಲಿಲ್ಲ.



Join Whatsapp