ಸೀಟ್ ಬೆಲ್ಟ್ ಬಗ್ಗೆ ಮಾತನಾಡುವ ಮುನ್ನ ರಸ್ತೆ ಗುಂಡಿಗಳನ್ನು ಮುಚ್ಚಲಿ: ನಟಿ ಪೂಜಾ ಭಟ್

Prasthutha|

ಮುಂಬೈ: ಸೀಟ್ ಬೆಲ್ಟ್ ಮತ್ತು ಏರ್ ಬ್ಯಾಗ್ ಗಳ ಬಗ್ಗೆ ಮಾತನಾಡುವುದಕ್ಕಿಂತ ಗುಂಡಿಗಳು ಮತ್ತು ಹಾಳಾದ ರಸ್ತೆಗಳನ್ನು ಸರಿಪಡಿಸುವುದದು ಹೆಚ್ಚು ಮುಖ್ಯ ಎಂದು ಖ್ಯಾತ ನಟಿ ಮತ್ತು ನಿರ್ಮಾಪಕಿ ಪೂಜಾ ಭಟ್ ಹೇಳಿದ್ದಾರೆ.

- Advertisement -

ಕಾರು ಅಪಘಾತದಲ್ಲಿ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ ಕೆಲವು ದಿನಗಳ ನಂತರ ಕಾರಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಕಡ್ದಾಯ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದರು.

ಇದಕ್ಕೆ ಪ್ರತಿಕ್ರಯಿಸಿದ ಪೂಜಾ, ಸೀಟ್ ಬೆಲ್ಟ್ ಮತ್ತು ಏರ್ ಬ್ಯಾಗ್ಗಳ ಬಗ್ಗೆ ಹಲ ಮಾತುಗಳು ಕೇಳಿಬರುತ್ತಿವೆ. ಅದು ಮುಖ್ಯ ಹೌದು. ಆದರೆ ರಸ್ತೆಗುಂಡಿಗಳು ಮತ್ತು ಹಾನಿಗೊಳಗಾದ ರಸ್ತೆಗಳನ್ನು ಸರಿಪಡಿಸುವುದು ಹೆಚ್ಚು. ನಮ್ಮ ರಸ್ತೆಗಳು, ಹೆದ್ದಾರಿಗಳು, ಫ್ರೀವೇಗಳನ್ನು ನಿರ್ಮಿಸಲು ಕಳಪೆ ಗುಣಮಟ್ಟದ ವಸ್ತುಗಳ ಬಳಕೆಯನ್ನು ಯಾವಾಗ ಅಪರಾಧವೆಂದು ಪರಿಗಣಿಸಲಾಗುತ್ತದೆ? ಒಮ್ಮೆ ನಿರ್ಮಿಸಿದ ಮತ್ತು ಉದ್ಘಾಟನೆಗೊಂಡ ರಸ್ತೆಗಳನ್ನು ಸರಿಯಾಗಿ ನಿರ್ವಹನೆ ಮಾಡುವುದು ಸಹ ಮುಖ್ಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

- Advertisement -

ಈ ಟ್ವೀಟ್ ಗೆ ಸಾರ್ವಜನಿಕರಿಂದ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದ್ದು, ದಿನಕ್ಕೊಂದರಂತೆ ಸಾರಿಗೆ ನಿಯಮ ಜಾರಿಮಾಡುವ ಮುನ್ನ ರಸ್ತೆ ಕಾಮಗಾರಿ ಸರಿಪಡಿಸಲಿ ಎಂದು ಹೇಳಿದ್ದಾರೆ.



Join Whatsapp