ಮನುಷ್ಯತ್ವ ಇಲ್ಲದ ಪಡ್ಡೆಗಳು ಸಂಸದರಾಗಿದ್ದು ದುರಂತ: ತೇಜಸ್ವಿ ಸೂರ್ಯ ವಿರುದ್ಧ ಎಎಪಿ ಕಿಡಿ

Prasthutha|

ಬೆಂಗಳೂರು: “ಕನ್ನಡನಾಡಿಗೆ ಕಷ್ಟ ಬಂದಾಗಲೆಲ್ಲಾ ಬಿಜೆಪಿಯವರು ಸೌಜನ್ಯ ಮರೆತು, ಮನುಷ್ಯತ್ವ ಇಲ್ಲದೇ ನಡೆದುಕೊಳ್ಳುತ್ತಾರೆ ಎಂಬುದನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತೆ ತೋರಿಸಿಕೊಟ್ಟಿದ್ದಾರೆ” ಎಂದು ಆಪ್ ಯುವ ಘಟಕದ ಅಧ್ಯಕ್ಷ ಮುಕುಂದ್ ಗೌಡ ತಮ್ಮ ಟ್ವೀಟ್ ನಲ್ಲಿ ಕಿಡಿಕಾರಿದ್ದಾರೆ.

- Advertisement -


ಸಾಮಾಜಿಕ ಜಾಲತಣದಲ್ಲಿ ಕಾಣಿಸುತ್ತಿರುವ ಸೂರ್ಯ ಅವರ ವಿಡಿಯೋ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, “ಬೆಂಗಳೂರಿನ ಬಹುಭಾಗ ಮಳೆಹಾನಿಯಿಂದ ತತ್ತರಿಸಿ ಹೋಗಿರುವಾಗ ಯಾವುದೋ ಹೋಟೆಲ್ ನ ಊಟ ಸವಿದು ಅದರ ಪ್ರಚಾರ ಮಾಡಲು ಹೊರಟಿರುವುದು ಅತಿರೇಕ ಮತ್ತು ಅಸಹ್ಯದ ವರ್ತನೆ ನಾಚಿಕೆಗೇಡಿನದ್ದು. ಬಿಜೆಪಿಯ ಬಾಲಿಶ ರಾಜಕಾರಣಕ್ಕೆ ಇದಕ್ಕಿಂತ ಉದಾಹರಣೆ ಬೇಕಾಗಿಲ್ಲ ಎಂದರು”.


” ಇಡೀ ಬಿಜೆಪಿ ಶಾಸಕರು ಸಚಿವರೊಂದಿಗೆ ಸಂಸದರೂ 40% ಕಮಿಷನ್ ಫಲಾನುಭವಿಗಳಾಗಿ ಇಂದು ನಗರ ಕೊಚ್ಚಿಹೋಗಲು ಕಾರಣರಾಗಿದ್ದಾರೆ, ಇಂಥವರನ್ನು ಪಡೆದದ್ದು ಬೆಂಗಳೂರಿನ ದೌರ್ಭಾಗ್ಯ” ಎಂದರು.




Join Whatsapp