ಸಂಸ್ಕೃತ ಭಾಷೆ ಅಧ್ಯಯನಕ್ಕೆ ವಿದೇಶದಿಂದ ಮಲೆನಾಡಿಗೆ ಬಂದ ವಿದ್ಯಾರ್ಥಿಗಳು

Prasthutha|

ಚಿಕ್ಕಮಗಳೂರು: ಸಂಸ್ಕೃತ ಭಾಷೆ ಅಧ್ಯಯನ ಮಾಡಲು 6 ಮಂದಿ ವಿದೇಶೀ ವಿದ್ಯಾರ್ಥಿಗಳು ಭಾರತಕ್ಕೆ ಆಗಮಿಸಿದ್ದಾರೆ.

- Advertisement -


ಪ್ರಸ್ತುತ ಸಂಸ್ಕೃತ ಅಧ್ಯಯನಕ್ಕೆಂದು ಬಂದವರು ಮೂಲತಃ ಇಸ್ರೇಲ್ ದೇಶದವರು. ಇಸ್ರೇಲ್ ನಲ್ಲಿ ಸಂಸ್ಕೃತದಲ್ಲೇ ಪಿಎಚ್ ಡಿ ಪಡೆದ ಉಪನ್ಯಾಸಕ ರಫಿಯೊಂದಿಗೆ 6 ಮಂದಿ ವಿದ್ಯಾರ್ಥಿಗಳೊಂದಿಗೆ ಭಾರತಕ್ಕೆ ಬಂದಿದ್ದಾರೆ.


ಉಪನ್ಯಾಸಕ ರಫಿ, ಭಾರತದ ಸಂಸ್ಕೃತ, ಭಾಷೆ, ಆಚಾರ-ವಿಚಾರ ತಿಳಿಸುವ ಸಲುವಾಗಿ ವಿದ್ಯಾರ್ಥಿಗಳಾದ ಇನ್ಬಾಲ್,ಆದಿ, ಗಾಲಿ, ಅವ್ಯಾದ್,ಎಲಾ, ಓಲ್ಗಾ ಎಂಬ ತನ್ನ ಆರು ಮಂದಿ ವಿದ್ಯಾರ್ಥಿಗಳನ್ನು ಕರೆತಂದಿದ್ದಾರೆ. ಇಸ್ರೇಲ್ ನಲ್ಲಿ 2ನೇ ವರ್ಷದ ಬಿ.ಎ ಪದವಿಯನ್ನು ವ್ಯಾಸಂಗ ಮಾಡುತ್ತಿರುವ ಈ 6 ಮಂದಿ ವಿದ್ಯಾರ್ಥಿಗಳು ಹೀರೇಮಗಳೂರಿನಲ್ಲಿ ನೆಲೆಸಿದ್ದಾರೆ.

- Advertisement -


ಇಸ್ರೇಲ್ ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಇವರು ರಜೆ ಸಮಯದ 12 ದಿನಗಳ ಕಾಲ ಸಂಸ್ಕೃತ ಕಲಿಯುವ ಸಲುವಾಗಿ ಉಪನ್ಯಾಸಕ ರಫಿ ಜೊತೆ ಭಾರತಕ್ಕೆ ಬಂದಿದ್ದಾರೆ. ಇದೀಗ ಹಿರೇಮಗಳೂರಿನಲ್ಲಿ ಕಾಳಿದಾಸನ ರಘುವಂಶದ ಕಾವ್ಯದ ಜೊತೆಗೆ ಶ್ಲೋಕಗಳನ್ನು ಕಲಿಯುತ್ತಿದ್ದಾರೆ.


ಭಾಷೆ ಗೊತ್ತಿಲ್ಲ, ಸ್ನೇಹಿತರು-ಸಂಬಂಧಿಗಳಿಲ್ಲ, ಇಲ್ಲಿನ ಊಟ-ತಿಂಡಿಯ ಅರಿವಿಲ್ಲ, ಆದರೂ ಸಹ ಹಿರೇಮಗಳೂರಿನಲ್ಲಿ ಉಳಿದುಕೊಂಡು ಸಂಸ್ಕೃತ ಕಲಿಯುತ್ತಿರುವ ಈ ವಿದ್ಯಾರ್ಥಿಗಳ ಭಾರತೀಯ ಪ್ರೀತಿಗೆ ಸ್ಥಳೀಯರೇ ಮನಸೋತಿದ್ದಾರೆ.




Join Whatsapp