ಅಂಬೇಡ್ಕರ್ ಭಾವಚಿತ್ರಕ್ಕೆ ಸೆಗಣಿ ಬಳಿದ ದುಷ್ಕರ್ಮಿಗಳು: ಬಾಗಲಕೋಟೆಯಲ್ಲಿ ಬಿಗು ವಾತಾವರಣ

Prasthutha|

ಬಾಗಲಕೋಟೆ: ಶಾಲೆಯ ಗೋಡೆಯಲ್ಲಿದ್ದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರಕ್ಕೆ ಕೆಲವು ಕಿಡಿಗೇಡಿಗಳು ಸೆಗಣಿ ಬಳಿದಿದ್ದು, ಜಿಲ್ಲೆಯ ಗುಳೇದಗಯಡ್ಡ ತಾಲೂಕಿನ ಹಂದರಂಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ,

- Advertisement -

ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಯಲ್ಲಿ ಚಿತ್ರೀಕರಿಸಲಾಗಿದ್ದ ಅಂಬೇಡ್ಕರ್ ಭಾವಚಿತ್ರಕ್ಕೆ ಭಾನುವಾರ ರಾತ್ರಿ ದುಷ್ಕರ್ಮಿಗಳು ಸೆಗಣಿ ಬಳಿದಿದ್ದರು. ವಿಷಯ ತಿಳಿದು ಸ್ಥಳಕ್ಕೆ ಜಮಾಯಿಸಿದ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು,

ಕೆರೂರ ಪೊಲೀಸರು ಪ್ರಕರಣ ದಾಖಲಿಸಿ ಕಿಡಿಗೇಡಿಗಳ ಅನ್ವೇಷಣೆ ಪ್ರಾರಂಭಿಸಿದ್ದಾರೆ.

Join Whatsapp