ಮುಧೋಳ: ಮುಸ್ಲಿಂ ಯುವಕನ ಹತ್ಯೆ ಪ್ರಕರಣ; ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

Prasthutha|

ಬಾಗಲಕೋಟೆ: ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತನಿಂದ ಕೊಲೆಯಾದ ಮಹಿಬೂಬ್ ಅವರ ಮೃತದೇಹವನ್ನು ನಗರದ ಮುಖ್ಯ  ವೃತ್ತದಲ್ಲಿಟ್ಟು  ಮುಸ್ಲಿಂ ಸಮುದಾಯದ ಪ್ರಮುಖರು ಪ್ರತಿಭಟನೆ ನಡೆಸಿದ್ದಾರೆ.

- Advertisement -

ಹತ್ಯೆಯ ಪ್ರಮುಖ ಆರೋಪಿಯ ಬಂಧನವಾಗಿದ್ದು, ಇತರ  ಆರೋಪಿಗಳನ್ನು ಬಂಧಿಸಿ  ಅವರ ವಿರುದ್ಧ ಕಠಿಣ  ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ. ಪರಿಸ್ಥಿತಿಯ ಉದ್ವಿಗ್ನತೆಯನ್ನು ಅರಿತ ಪೊಲೀಸರು  ಪ್ರತಿಭಟನಾ ಪ್ರದೇಶವನ್ನು ಬ್ಯಾರಿಕೇಡ್ ಮಾಡಿದ್ದಾರೆ.



Join Whatsapp