ಉಜಿರೆ: ಟಯರ್ ಅಂಗಡಿಯಲ್ಲಿ ಬೆಂಕಿ ಅವಘಡ

Prasthutha|

ಬೆಳ್ತಂಗಡಿ: ಇಲ್ಲಿನ ಉಜಿರೆಯ ಅನುಗ್ರಹ ಶಾಲೆ ಮುಂಭಾಗದ ಅಂಗಡಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.

- Advertisement -


ಶಶಿಧರ ಗೌಡ ಎಂಬವರ ವಾಣಿಜ್ಯ ಮಳಿಗೆಯಲ್ಲಿದ್ದ ಅನಾರ್ ಟಯರ್ಸ್, ರಕ್ಷಾ ಆಗ್ರೋ ಮಳಿಗೆಗಳಲ್ಲಿ ಈ ಅವಘಡ ಸಂಭವಿಸಿದ್ದು, ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ವಾಹನ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಲು ಕಾರ್ಯಾಚರಣೆ ನಡೆಸಿದೆ.


ಬೆಂಕಿ ಅನಾಹುತಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಆಕಾಶದೆತ್ತರದಲ್ಲಿ ದಟ್ಟ ಹೊಗೆ ಹರಡುತ್ತಿದ್ದು, ಸ್ಥಳೀಯರು ಘಟನೆಯಿಂದ ಆತಂಕಗೊಂಡಿದ್ದಾರೆ.



Join Whatsapp