ಪಂಪ್ ವೆಲ್ ನಲ್ಲಿ ದೇಶವಿರೋಧಿ ಫ್ಲೆಕ್ಸ್: ತೆರವುಗೊಳಿಸದ ಜಿಲ್ಲಾಡಳಿತ

Prasthutha|

ಮಂಗಳೂರು: ನಗರದ ಪಂಪ್ ವೆಲ್ ನಲ್ಲಿ ದೇಶವಿರೋಧಿಯಾದ “ಹಿಂದೂ ರಾಷ್ಟ್ರ” ಎಂಬ ಫ್ಲೆಕ್ಸ್ ಹಾಕಲಾಗಿದ್ದು, ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಇದುವರೆಗೆ ಅದನ್ನು ತೆರವುಗೊಳಿಸಲು ಮುಂದಾಗಿಲ್ಲ.

- Advertisement -


ಬಜರಂಗದಳ ಬ್ಯಾನರ್ ಆಳವಡಿಸಿದ್ದು, ಬ್ರಿಟಿಷರೊಂದಿಗೆ ಕ್ಷಮೆ ಕೇಳಿ ಸ್ವಾತಂತ್ರ್ಯ ಹೋರಾಟದಿಂದ ಹಿಂದೆ ಸರಿದ ವಿ.ಡಿ.ಸಾವರ್ಕರ್ ಅವರ ಫೋಟೋ ಹಾಕಲಾಗಿದೆ, ಅದರ ಮೇಲೆ ದೇಶವಿರೋಧಿ ಹೇಳಿಕೆಯಾದ “ಹಿಂದೂ ರಾಷ್ಟ್ರ” ಎಂದು ಬರೆಯಲಾಗಿದೆ. ಅದರ ಕೆಳಗೆ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಎಂದು ಬರೆಯಲಾಗಿದೆ.


“ಭಾರತ ಜಾತ್ಯತೀತ ರಾಷ್ಟ್ರ. ಹಿಂದೂ ರಾಷ್ಟ್ರ ಎಂದು ಹೇಳುವುದು ದೇಶದ್ರೋಹ ಅಲ್ಲವೇ?” ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಅಲ್ಲದೆ ಕೂಡಲೇ ಈ ಫ್ಲೆಕ್ಸ್ ಅನ್ನು ತೆರವುಗೊಳಸಬೇಕೆಂದು ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

- Advertisement -

ಅದೇ ರೀತಿ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಎಂಬಲ್ಲಿಯೂ ಬ್ರಿಟಿಷರೊಂದಿಗೆ ಕ್ಷಮೆ ಕೇಳಿದ ವಿ.ಡಿ.ಸಾವರ್ಕರ್ ಹೆಸರನ್ನು ಪ್ರವೇಶ ದ್ವಾರಕ್ಕೆ ಇಡಲಾಗಿದೆ. ಇದರ ಬಗ್ಗೆಯೂ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.



Join Whatsapp