ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂ ವಂಚನೆ

Prasthutha|

ಶಿವಮೊಗ್ಗ: ಮದುವೆಯಾಗುವುದಾಗಿ ನಂಬಿಸಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ  ಮಹಿಳೆಯೋರ್ವಳಿಂದ ಲಕ್ಷಾಂತರ ರೂಪಾಯಿ ಹಣ  ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

- Advertisement -

ಮ್ಯಾಟ್ರಿಮನಿ ಯೊಂದರಲ್ಲಿ ಪರಿಚಯವಾದ ವಿಜಯರಾಜ್ ಗೌಡ ಎಂಬಾತ ಮದುವೆಯಾಗುವುದಾಗಿ ನಂಬಿಸಿ ತನ್ನ ಕೈಯಿಂದ 13.55 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದಾನೆ ಎಂದು ವಂಚನೆಗೊಳಗಾದ ಮಹಿಳೆ ಶಿವಮೊಗ್ಗದ ಸಿಇಎನ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರಿನಲ್ಲಿ ವಾಸವಾಗಿರುವ ವಿಜಯರಾಜ್ ಗೌಡ ಮ್ಯಾಟ್ರಿಮನಿ ಸೈಟ್ ನಲ್ಲಿ ಮಹಿಳೆಗೆ ಪರಿಚಯವಾಗಿದ್ದ. ಇಬ್ಬರೂ  ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು ಚಾಟಿಂಗ್ ಮಾಡಿದ್ದು, ತನ್ನ ಮನೆ ಮೇಲೆ ಐಟಿ ದಾಳಿಯಾಗಿದ್ದು, ಹಣದ ಅವಶ್ಯಕತೆಯಿದೆ ಎಂದು ವಿಜಯರಾಜ್ ಗೌಡ ಮಹಿಳೆಗೆ ಸಂದೇಶ ಕಳುಹಿಸಿದ್ದ. ಇದನ್ನು ನಂಬಿದ ಮಹಿಳೆ ಆಗಸ್ಟ್ 5 ರಿಂದ 22ರ ವರೆಗೆ ಹಂತ ಹಂತವಾಗಿ 13.55 ಲಕ್ಷ ರೂ. ಆತನ ಖಾತೆಗೆ  ಹಣ ಕಳುಹಿಸಿದ್ದಾರೆ.

- Advertisement -

ಹಣ ಮರಳಿ ಕೇಳಲು ಕರೆ ಮಾಡಿದಾಗ ಆತ ಕರೆ ಸ್ವೀಕರಿಸಿಲ್ಲ ಎಂದು ಮಹಿಳೆ ದೂರು ನೀಡಿ ಕಳೆದುಕೊಂಡಿರುವ ಹಣ ಹಾಗೂ ಆಗಿರುವ ವಂಚನೆಗೆ ನ್ಯಾಯ ಒದಗಿಸಿಕೊಡುವಂತೆ ಕೋರಿದ್ದಾರೆ.



Join Whatsapp