ಜಯಲಲಿತಾ ಸಾವು: ಆಯೋಗದಿಂದ ವರದಿ ಸಲ್ಲಿಕೆ

Prasthutha|

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಂಶಯಾಸ್ಪದ ಸಾವಿನ ತನಿಖೆಗಾಗಿ ನೇಮಿಸಲಾಗಿದ್ದ ನಿವೃತ್ತ ನ್ಯಾಯಾಧೀಶ ಎ. ಆರ್ಮಗಸ್ವಾಮಿ ಆಯೋಗವು ಶನಿವಾರ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ರಿಗೆ ವರದಿ ಸಲ್ಲಿಸಿದೆ.

- Advertisement -

ಆಸ್ಪತ್ರೆಯಲ್ಲಿ ಸಾವಿಗೀಡಾದ ಜಯಲಲಿತಾರ ಸಾವಿನ ಬಗ್ಗೆ ಗುಮಾನಿ ವ್ಯಕ್ತವಾದುದರಿಂದ 2017ರಲ್ಲಿ ಈ ಆಯೋಗವನ್ನು ನೇಮಿಸಲಾಗಿತ್ತು.

150 ಸಾಕ್ಷ್ಯಗಳನ್ನು, ಸಾಕ್ಷಿಗಳನ್ನು ಕಂಡಿರುವ ಈ ವರದಿಯನ್ನು ಜಸ್ಟಿಸ್ ಎ. ಆರ್ಮಗಸ್ವಾಮಿ ಅವರು ಇಂಗ್ಲಿಷ್ ಮತ್ತು ತಮಿಳಿನಲ್ಲಿ ಸಿದ್ಧ ಪಡಿಸಿದ್ದಾರೆ. 600 ಪುಟಗಳ ವರದಿಯನ್ನು ಇಂದು ಬೆಳಿಗ್ಗೆ ಮುಖ್ಯಮಂತ್ರಿಗಳ ಸೆಕ್ರೆಟೆರಿಯೇಟಿಗೆ ಸಲ್ಲಿಸಿದರು.

- Advertisement -

ವೈದ್ಯಕೀಯ ವರದಿ ಮತ್ತು ಸಾಕ್ಷ್ಯಕ್ಕಾಗಿ ಎಐಐಎಂಎಸ್ ರಚಿಸಿದ ಸಮಿತಿಯು ಜಸ್ಟಿಸ್ ಆರ್ಮಗಸ್ವಾಮಿಯವರಿಗೆ ಸಹಾಯ ಸಹಕಾರ ನೀಡಿತು. ಅಪೋಲೋ ಆಸ್ಪತ್ರೆಯವರು ಜಯಲಲಿತಾರಿಗೆ ನೀಡಿದ ಚಿಕಿತ್ಸೆ ಬಗೆಗೆ ಈ ಮೊದಲೇ ಜಸ್ಟಿಸ್ ಆರ್ಮಗಸ್ವಾಮಿಯವರ ಆಯೋಗವು ಕ್ಲೀನ್ ಚಿಟ್ ವರದಿಯನ್ನು ಸಲ್ಲಿಸಿತ್ತು.



Join Whatsapp