ಆಗಸ್ಟ್ 15 ರಂದು ಗೌರವಿಸಲ್ಪಟ್ಟ ಅಧಿಕಾರಿ, ಲಂಚ ಪಡೆದ ಆರೋಪದ ಮೇಲೆ ಬಂಧನ

Prasthutha|

ಜೈಪುರ: ಆಗಸ್ಟ್ 15 ರಂದು ಕ್ಯಾಬಿನೆಟ್ ಸಚಿವರು, ಕಲೆಕ್ಟರ್, ಎಸ್ಪಿಯ ಸಮ್ಮುಖದಲ್ಲಿ ಪ್ರಶಂಸನೀಯ ಕೆಲಸಕ್ಕಾಗಿ ಗೌರವಿಸಲ್ಪಟ್ಟ  ಜಿಲ್ಲಾ ಶಿಕ್ಷಣಾಧಿಕಾರಿಯನ್ನು, 50,000 ರೂ.ಗಳ ಲಂಚ ಸ್ವೀಕರಿಸುವಾಗ ಎಸಿಬಿ ರೆಡ್ ಹ್ಯಾಂಡ್ ಆಗಿ ಬಂಧಿಸಿದೆ.

- Advertisement -

ಇದರ ಜೊತೆಗೆ ಜಿಲ್ಲಾ ಶಿಕ್ಷಣಾಧಿಕಾರಿ ಕೇಸರ್ ಡಾನ್ ರತ್ನು ಅವರು 5 ದಿನಗಳ ನಂತರ ನಿವೃತ್ತಿಯಾಗಲಿದ್ದಾರೆ.

ಶಿಕ್ಷಣ ಅಧಿಕಾರಿ ಅವರು ವೇತನ ಮತ್ತು ಇಲಾಖಾ ವಿಚಾರಣೆಗೆ ಸಹಾಯ ಮಾಡುವ ಹೆಸರಿನಲ್ಲಿ 2 ಲಕ್ಷ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಶಾಲೆಯ ಶಿಕ್ಷಕನೊಬ್ಬ ಎಸಿಬಿ ಗೆ ದೂರು ನೀಡಿದ್ದರು. ಆಗಸ್ಟ್ 24 ರಂದು, ದೂರನ್ನು ಪರಿಶೀಲಿಸಿ ಶನಿವಾರ ಕ್ರಮ ತೆಗೆದುಕೊಳ್ಳಲಾಗಿದೆ

- Advertisement -

ಮಾಧ್ಯಮಗಳೊಂದಿಗೆ ಮಾತನಾಡಿದ ಎಸಿಬಿ ಡಿಎಸ್ಪಿ ಅಣ್ಣಾರಾಜ್, ಬಾರ್ಮರ್ ಜಿಲ್ಲೆಯ ಚೌಹಟನ್ ಪಟ್ಟಣದ ಸ್ಟೇಷನರಿ ಅಂಗಡಿಯಲ್ಲಿ ಬ್ರೋಕರ್ ಜೀವಂದನ್ ಅಶು ಸಿಂಗ್ ಮೂಲಕ 50,000 ರೂ.ಗಳ ಲಂಚ ಸ್ವೀಕರಿಸುವಾಗ ಕೇಸರ್ ಡಾನ್ ರತ್ನು ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.



Join Whatsapp