ಬೆಳಗಾವಿ ನಗರದಲ್ಲಿ ಭೀತಿ ಹೆಚ್ಚಿಸಿರುವ ಚಿರತೆ ಸೆರೆಗೆ ಶಿವಮೊಗ್ಗದಿಂದ ವಿಶೇಷ ತಂಡ

Prasthutha|

ಶಿವಮೊಗ್ಗ: ಬೆಳಗಾವಿ ನಗರದಲ್ಲಿ ಕೆಲವು ದಿನಗಳಿಂದ ಜನರ ಆತಂಕ ಹೆಚ್ಚಿಸಿರುವ ಚಿರತೆಯನ್ನು ಸೆರೆ ಹಿಡಿಯಲು ಶಿವಮೊಗ್ಗದಿಂದ ವಿಶೇಷ ತಂಡ ಬೆಳಗಾವಿಗೆ ತೆರಳಿದೆ.

- Advertisement -


ಚಿರತೆ ಸೆರೆ ಹಿಡಿಯಲು ಸಕ್ರೆಬೈಲ್ ಆನೆ ಬಿಡಾರದಿಂದ ಆಲೆ ಮತ್ತು ಅರ್ಜುನ ಎಂಬ ಎರಡು ಆನೆಗಳ ಸಹಿತ ವೈದ್ಯರು ಮತ್ತು ಮಾವುತರ ವಿಶೇಷ ತಂಡ ಬೆಳಗಾವಿಗೆ ಪ್ರಯಾಣಿಸಿದೆ. ಸಹಾಯಕ ಸಿಬ್ಬಂದಿ, ಕಾವಾಡಿಗಳು ಮತ್ತು ಬಿಡಾರದ ಸಹಾಯಕ ಸಿಬ್ಬಂದಿ ತಂಡದಲ್ಲಿದ್ದಾರೆ.

ಬೆಳಗಾವಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜನರಲ್ಲಿ ಭೀತಿ ಹುಟ್ಟಿಸಿರುವ ಚಿರತೆ ಸೆರೆಗೆ ಅರಣ್ಯ ಇಲಾಖೆ ನಾನಾ ರೀತಿಯ ಕಾರ್ಯಾಚರಣೆ ನಡೆಸಿದರೂ ಯಶಸ್ವಿಯಾಗದ ಕಾರಣ ಅಲ್ಲಿನ ಅಧಿಕಾರಿಗಳ ಮನವಿ ಮೇರೆಗೆ ಶಿವಮೊಗ್ಗದ ಡಾಟಿಂಗ್ ಸ್ಪೆಷಲಿಸ್ಟ್ ವನ್ಯಜೀವಿ ತಜ್ಞ ಡಾ.ವಿನಯ್ ನೇತೃತ್ವದಲ್ಲಿ ವಿಶೇಷ ತಂಡ ಬೆಳಗಾವಿಗೆ ತೆರಳಿದೆ.



Join Whatsapp