ಶಿಕ್ಷೆ ನೀಡಬೇಕಾಗಿರುವುದು ಶ್ರೀಕಾಂತ್ ತ್ಯಾಗಿಗೆ, ಅವರ ಕುಟುಂಬಕ್ಕಲ್ಲ: ಕೇಂದ್ರ ಸಚಿವ ಸಂಜೀವ್ ಬಲ್ಯಾನ್

Prasthutha|

ನವದೆಹಲಿ: ಶ್ರೀಕಾಂತ್ ತ್ಯಾಗಿ ಅವರು ಏನೇ ಮಾಡಿದರೂ ಅವರಿಗೆ ಶಿಕ್ಷೆಯಾಗಬೇಕು, ಆದರೆ ಅವರ ಕುಟುಂಬಕ್ಕೆ ಯಾವುದೇ ರೀತಿಯ ಅನ್ಯಾಯವಾಗಬಾರದು ಎಂದು ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಹೇಳಿದ್ದಾರೆ.

- Advertisement -

ನೋಯ್ಡಾದಲ್ಲಿ ಮಹಿಳೆಯೊಬ್ಬರನ್ನು ನಿಂದಿಸಿದ ಮತ್ತು ಹಲ್ಲೆ ನಡೆಸಿದ ಆರೋಪದ ಮೇಲೆ ಇತ್ತೀಚೆಗೆ ಬಂಧಿಸಲ್ಪಟ್ಟ ಶ್ರೀಕಾಂತ್ ತ್ಯಾಗಿ ಅವರನ್ನು ಬೆಂಬಲಿಸಿ ತ್ಯಾಗಿ ಸಮುದಾಯ ಆಯೋಜಿಸಿದ್ದ ‘ಮಹಾಪಂಚಾಯತ್ ಗೆ ಭಾಗವಹಿಸಿ ಪ್ರತಿಕ್ರಿಯೆ ನೀಡಿದ  ಅವರು  ತ್ಯಾಗಿ ಸಮುದಾಯವು ಯಾವಾಗಲೂ ನಮಗೆ ಮತ ಹಾಕಿದೆ, ಆದ್ದರಿಂದ ಏನಾದರೂ ಇದ್ದರೆ, ನಾವು ಅವರೊಂದಿಗೆ ಕುಳಿತು ಮಾತನಾಡುತ್ತೇವೆ ಎಂದು ಸಚಿವರು ಹೇಳಿದರು.

ನೊಡಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಹಾಸ್ ಲಾಲಿನಕೆರೆ ಯತಿರಾಜ್ ಮಾತನಾಡಿ, ಮಹಾಪಂಚಾಯತ್ ಶಾಂತಿಯುತವಾಗಿ ನಡೆಯಿತು. ನಾವು ಅವರ ಮನವಿ ಪತ್ರವನ್ನು ತೆಗೆದುಕೊಂಡಿದ್ದೇವೆ ಮತ್ತು ಆಡಳಿತವು ಅದನ್ನು ಪರಿಶೀಲಿಸುತ್ತದೆ ಮತ್ತು ಅದರಂತೆ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಂ ಹೇಳಿದರು.



Join Whatsapp