ಕೊಡಗು: ಒಲೆ ಉರಿಸುವ ಸಂದರ್ಭ ಬೆಂಕಿ ತಗುಲಿ ಯುವಕ ಸಾವು

Prasthutha|

ಮಡಿಕೇರಿ: ಒಲೆ ಉರಿಸುವ ಸಂದರ್ಭ ಆಕಸ್ಮಿಕವಾಗಿ ಬೆಂಕಿ ತಗುಲಿ ಯುವಕ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಇಂಜಲಗರೆಯಲ್ಲಿ ನಡೆದಿದೆ.

- Advertisement -

ವಿರಾಜಪೇಟೆ ತಾಲ್ಲೂಕಿನ ಇಂಜಲಗರೆಯ ಕಲ್ಲುಕೋರೆ ನಿವಾಸಿ ಶಶಿ ಎಂಬವರ ಪುತ್ರ ನಿತೀನ್ (26) ಎಂಬವರು ಶನಿವಾರ ಮದ್ಯಾಹ್ನದ ವೇಳೆ ಮನೆಯಲ್ಲಿ ಡೀಸೆಲ್‌ ಬಳಸಿ ಒಲೆ ಉರಿಸುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಸಂಪೂರ್ಣ ಮೈಗೆ ಬೆಂಕಿ‌ ಆವರಿಸಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ನಿತಿನ್ ಕೊನೆಯುಸಿರೆಳೆದರು. ನಿತಿನ್ ವಿವಾಹವಾಗಿದ್ದು, ಪತ್ನಿ ಹಾಗೂ ಪುಟ್ಟ ಮಗುವಿನೊಂದಿಗೆ ಸಂಸಾರ ಸಾಗಿಸುತ್ತಿದ್ದರು.



Join Whatsapp