ಮಂಗಳೂರು: ಸಮುದ್ರಕ್ಕೆ ಇಳಿದಿದ್ದ ಯುವಕ ನೀರುಪಾಲು

Prasthutha|

ಮಂಗಳೂರು: ಕಡಲಿಗೆ ಸ್ನಾನಕ್ಕೆಂದು ಇಳಿದಿದ್ದ ಯುವಕನೋರ್ವ ನೀರುಪಾಲಾದ ಘಟನೆ ತಣ್ಣೀರು ಬಾವಿ ಸಮುದ್ರದಲ್ಲಿ ನಡೆದಿದೆ.

- Advertisement -

ತಣ್ಣೀರುಬಾವಿ ನಿವಾಸಿ ಮುಹಮ್ಮದ್ ಕೈಫ್(19) ನೀರುಪಾಲಾದವರು ಎಂದು ಗುರುತಿಸಲಾಗಿದೆ.

ಕೈಫ್ ಶುಕ್ರವಾರ ಸಂಜೆ ವೇಳೆಗೆ ತಣ್ಣೀರುಬಾವಿ ಕಡಲಿಗೆ ಸ್ನಾನಕ್ಕೆ ಹೋಗಿದ್ದು, ಕಡಲಿನ ಅಲೆಗಳಿಗೆ ಸಿಲುಕಿ ಸಮುದ್ರಪಾಲಾಗಿದ್ದಾರೆ.

- Advertisement -

ಕೈಫ್ ಇನ್ನು ಪತ್ತೆಯಾಗದ ಕಾರಣ ಮೀನುಗಾರರು ಹಾಗೂ ಸ್ಥಳೀಯ ಈಜುಗಾರರು ಹುಡುಕಾಟದಲ್ಲಿ ತೊಡಗಿದ್ದಾರೆ.



Join Whatsapp