ವರದಕ್ಷಿಣೆಯಲ್ಲಿ 3 ಗ್ರಾಂ ಚಿನ್ನ ಕಡಿಮೆ: ಗಂಡನ ಮನೆಯವರ ಕಿರುಕುಳಕ್ಕೆ ನೊಂದು ಮೂರೇ ತಿಂಗಳಿಗೆ ಗೃಹಿಣಿ ಆತ್ಮಹತ್ಯೆ

Prasthutha|

ದಾವಣಗೆರೆ: ಮದುವೆಯಾದ ಮೂರೇ ತಿಂಗಳಿಗೆ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮೀಯಾಪುರದಲ್ಲಿ ನಡೆದಿದೆ.

- Advertisement -


ರೂಪಾಬಾಯಿ (22) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದು ಬಂದಿದೆ. ರೂಪಾಬಾಯಿ ಸಾವು ಕೊಲೆ ಎಂದು ಕೇಳಿಬರುತ್ತಿದ್ದು, ಇದಕ್ಕೆ ಕಾರಣ ಗಂಡನ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡಿ, ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ.
ರೂಪಾಬಾಯಿ ಮೂರು ತಿಂಗಳ ಹಿಂದೆ ಗಂಗಾಧರ್ (32) ಜೊತೆ ಮದುವೆಯಾಗಿದ್ದಳು. ಮದುವೆಗೆ ರೂಪಾಬಾಯಿ ಪೋಷಕರು ವರದಕ್ಷಿಣೆ ನೀಡಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಆದರೆ ಗಂಗಾಧರ್ ಪೋಷಕರು 3 ಗ್ರಾಂ ಚಿನ್ನ ಕಡಿಮೆ ನೀಡಿದ್ದಾರೆ ಎಂದು ರೂಪಾಬಾಯಿಗೆ ಕಿರುಕುಳ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.


ವರದಕ್ಷಿಣೆ ಕಡಿಮೆ ನೀಡಿರುವುದಕ್ಕೆ ರೂಪಾಬಾಯಿಯ ಮೇಲೆ ಆಕೆಯ ಪತಿಯ ಮನೆಯವರು ಹಲ್ಲೆ ಮಾಡಿ, ವಿಷ ಕುಡಿಸಿ ನಂತರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ಪೋಷಕರು ದೂರು ನೀಡಿದ್ದಾರೆ.



Join Whatsapp