20 ರೂ ಗಾಗಿ 22 ವರ್ಷ ಹೋರಾಡಿದ ವಕೀಲ: 120 ಬಾರಿ ವಿಚಾರಣೆ: ಕಡೆಗೂ ದೊರಕಿತು ನ್ಯಾಯ

Prasthutha|

ನವದೆಹಲಿ: ಉತ್ತರ ಪ್ರದೇಶದ ವಕೀಲರೊಬ್ಬರು ಭಾರತೀಯ ರೈಲ್ವೆ ಇಲಾಖೆ ಹೆಚ್ಚುವರಿಯಾಗಿ ವಿಧಿಸಿದ 20 ರೂ ಗಾಗಿ ಬರೋಬ್ಬರಿ 22 ವರ್ಷ ಕಾನೂನು ಹೋರಾಟ ನಡೆಸಿ ಕಡೆಗೂ ಜಯ ಗಳಿಸಿದ್ದಾರೆ.

- Advertisement -

ವೃತ್ತಿಯಲ್ಲಿ ವಕೀಲರಾಗಿದ್ದ ತುಂಗನಾಥ್ ಚತುರ್ವೇದಿ ಎಂಬವರು 1999 ರಲ್ಲಿ ಖರೀದಿಸಿದ ದುಬಾರಿ ಬೆಲೆಯ ಟಿಕೆಟ್ ಗೆ ಸಂಬಂಧಿಸಿದ ದಾವೆ ಇದಾಗಿದೆ.

ಅವರು ಮಥುರಾದಿಂದ ಮೊರಾದಾಬಾದ್‌ಗೆ ಪ್ರಯಾಣಿಸುತ್ತಿದ್ದಾಗ ಮಥುರಾ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಅವರು ಪಡೆದ ಎರಡು ಟಿಕೆಟುಗಳಿಗೆ ಕೇಂದ್ರದ ಗುಮಾಸ್ತನು 20 ರೂ. ಹೆಚ್ಚು ಶುಲ್ಕ ವಿಧಿಸಿದ್ದನು.

- Advertisement -

ಇದರ ವಿರುದ್ಧ ತುಂಗನಾಥ್ ನ್ಯಾಯಾಲಯದ ಮೊರೆ ಹೋಗಿದ್ದರು. ಮಥುರಾ ನ್ಯಾಯಾಲಯವು 22 ವರ್ಷಗಳ ಕಾಲ ಬರೋಬ್ಬರಿ 120 ಬಾರಿ ಈ ಪ್ರಕರಣದ ವಿಚಾರಣೆ ನಡೆಸಿದ್ದು , ತುಂಗನಾಥ್ ಅವರಿಗೆ 20 ರೂ ಹೆಚ್ಚುವರಿ ಶುಲ್ಕದ ಜೊತೆ 15000 ಬಡ್ಡಿಯನ್ನೂ ಬಡ್ಡಿಯಾಗಿ ನೀಡಲು ರೈಲ್ವೆ ಇಲಾಖೆಗೆ ಆದೇಶ ನೀಡಿದೆ.



Join Whatsapp