ಮಗನ ಮುಂದೆಯೇ ತಂದೆಯ ಬರ್ಬರ ಹತ್ಯೆ

Prasthutha|

ಮೈಸೂರು: ಅಪ್ರಾಪ್ತ ಮಗನ ಮುಂದೆಯೇ ತಂದೆಯನ್ನು ದುಷ್ಕರ್ಮಿಯೊಬ್ಬ ಭೀಕರ ಕೊಲೆ ಮಾಡಿರುವ ದುರ್ಘಟನೆ ನಗರದಲ್ಲಿ ನಡೆದಿದೆ.

- Advertisement -

ಬೃಂದಾವನ ಬಡಾವಣೆಯ ಸಂಪತ್ ಕುಮಾರ್ (60) ಕೊಲೆಯಾದ ವ್ಯಕ್ತಿ. ಸಂಪತ್ ಕುಮಾರ್ ರಿಯಲ್ ಎಸ್ಟೇಟ್ ಹಾಗೂ ಅಗರಬತ್ತಿ ವ್ಯಾಪಾರ ಮಾಡುತ್ತಿದ್ದು, ಅವರ ಪತ್ನಿ ಗಾಯತ್ರಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.

ಗಾಯತ್ರಿ ಅವರು ಮನೆಯಲ್ಲಿ ಇಲ್ಲದಿದ್ದಾಗ ಮನೆಗೆ ನುಗ್ಗಿದ ದುಷ್ಕರ್ಮಿ, ಸಂಪತ್ ಅವರನ್ನು ದುಷ್ಕರ್ಮಿ ರಾಡ್ ನಿಂದ ಹೊಡೆದು ಅವರ 16 ವರ್ಷದ ಮಗನ ಮುಂದೆಯೇ ಕೊಲೆ ಮಾಡಿದ್ದಾನೆ. ಮನೆಗೆ ಬಂದು ನೋಡಿದ ಮೇಲೆ ಗಾಯತ್ರಿ ಅವರಿಗೆ ವಿಷಯ ತಿಳಿದಿದ್ದು, ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

- Advertisement -

ಪ್ರಕರಣ ವಿ.ವಿ.ಪುರಂನಲ್ಲಿ ದಾಖಲಾಗಿದ್ದು ದುಷ್ಕರ್ಮಿ ಯಾರು, ಯಾವ ಉದ್ದೇಶಕ್ಕೆ ಈ ಕೆಲಸ ಮಾಡಿದ್ದಾನೆ ಎನ್ನುವುದರ ಕುರಿತು ಪೊಲೀಸರು ತನಿಖೆ ಮಾಡುತ್ತಿದ್ದಾರೆ.



Join Whatsapp