ಲಾರಿ ಹರಿದು ಬಾಲಕ ಮೃತ್ಯು: ಜನರಿಂದ ಕಲ್ಲು ತೂರಾಟ

Prasthutha|

ಬೆಳಗಾವಿ: ಲಾರಿಯೊಂದು ಬಾಲಕನ ಮೇಲೆ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ನಡೆದಿದ್ದು, ಈ ಘಟನೆಯಿಂದ ರೊಚ್ಚಿಗೆದ್ದ ಜನ ಲಾರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

- Advertisement -

ಮೃತಪಟ್ಟ ಬಾಲಕನನ್ನು ಅರ್ಹಾನ್ ಬೇಪಾರಿ ಎಂದು ಗುರುತಿಸಲಾಗಿದೆ.

ಕಬ್ಬಿಣದ ರಾಡು ತುಂಬಿಕೊಂಡು ಹೋಗುತ್ತಿದ್ದ ಲಾರಿ, ರಸ್ತೆ ದಾಟುತ್ತಿದ್ದ ಅಕ್ಕ, ತಮ್ಮ ಹಾಗೂ ಇನ್ನೊಬ್ಬ ಪಾದಚಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

- Advertisement -

ಅರ್ಹಾನ್ ಅಕ್ಕ ಅತಿಕಾ ಹಾಗೂ ಪಾದಚಾರಿ ಆಯುಷ್ ಎಂಬ ಇಬ್ಬರಿಗೂ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.



Join Whatsapp