ಕೊಡಗು: ಎಸ್.ವೈ.ಎಸ್ ಸಂಘಟನೆಯಿಂದ ಸ್ವಚ್ಚತಾ ಅಭಿಯಾನ

Prasthutha|

ಮಡಿಕೇರಿ: ನಿರ್ಮಲ ಮನಸ್ಸು ನೈರ್ಮಲ್ಯ ಪರಿಸರ ಎಂಬ ಶೀರ್ಷಿಕೆಯಲ್ಲಿ ಸುನ್ನಿ ಯುವಜನ ಸಂಘ ರಾಜ್ಯ ವ್ಯಾಪಿ ಹಮ್ಮಿಕೊಂಡಿರುವ ಸ್ವಚ್ಚತಾ ಅಭಿಯಾನಕ್ಕೆ ಸಿದ್ದಾಪುರದಲ್ಲಿ ಚಾಲನೆ ನೀಡಲಾಯಿತು.

- Advertisement -

ಎಸ್.ವೈ.ಎಸ್ ಸಿದ್ದಾಪುರ ಸೆಂಟರ್ ಸಮಿತಿಯಿಂದ ಸಮೀಪದ ಸರಕಾರಿ ಮಲಯಾಳಂ ಶಾಲೆಯಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಪರಿಸರ ಮಾಲಿನ್ಯವಾದರೆ ರೋಗವನ್ನು ಮೈಮೇಲೆ ಎಳೆದುಕೊಂಡಂತಾಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ತಮ್ಮ ಪರಿಸರವನ್ನು ಸ್ವಚ್ಛವಾಗಿಡಲು ಶ್ರಮಿಸಬೇಕೆಂದು ಸಂಘಟನೆಯ ಪ್ರಮುಖರು ಕರೆ ನೀಡಿದರು.

ಸರಕಾರಿ ಮಲಯಾಳಂ ಶಾಲೆಯ ಪ್ರವೇಶದ್ವಾರದ ಪಕ್ಕದಲ್ಲಿ ಕಸದ ರಾಶಿಗಳನ್ನು ಸುರಿದಿರುವ ಬಗ್ಗೆ ಸಿದ್ದಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರ ಗಮನಕ್ಕೆ ತರಲಾಗಿದ್ದು, ಬೇಕಾಬಿಟ್ಟಿ ಕಸ ಸುರಿಯುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯತಿಗೆ ಕಾರ್ಯಕರ್ತರು ಮನವಿ ಪತ್ರ ನೀಡಿರುವುದಾಗಿ ಸಿದ್ದಾಪುರ ಸೆಂಟರ್ ಅಧ್ಯಕ್ಷ ಶಿಹಾಬ್ ಲತೀಫಿ ತಿಳಿಸಿದರು.

- Advertisement -

ಸಂಘಟನೆಯ ಪ್ರಮುಖರಾದ ಅಝೀಝ್ ಮುಸ್ಲಿಯಾರ್ ಮಾಲ್ದಾರೆ, ಹಂಸ ಮುಸ್ಲಿಯಾರ್ ಗುಹ್ಯ, ಉಮ್ಮರ್ ಮಠ, ಎಂ.ಎ ರಶಾದ್ ಹಾಗೂ ಶಾಲಾ ಶಿಕ್ಷಕರು ಇದ್ದರು.



Join Whatsapp