ಕಡಬ: ಮೊಬೈಲ್ ಚಾರ್ಜ್ ತೆಗೆಯುವ ವೇಳೆ ಶಾಕ್ ಹೊಡೆದು ಬಾಲಕ ಸಾವು

Prasthutha|

ನೆಲ್ಯಾಡಿ : ಮೊಬೈಲ್ ಚಾರ್ಜ್ ತೆಗೆಯುವ ವೇಳೆ ವಿದ್ಯುತ್ ಶಾಕ್ ಹೊಡೆದು 15 ವಯಸ್ಸಿನ ಬಾಲಕನೊಬ್ಬ ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಗುಂಡ್ಯ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಇಂದು ಸಂಜೆ ನಡೆದಿದೆ.

- Advertisement -

ಗುಂಡ್ಯ ಗ್ರಾಮದ ಅಡ್ಡಹೊಳೆ ನಿವಾಸಿ ಮೊನೆಚ್ಚನ್ (ಥೋಮಸನ್) ಹಾಗೂ ವೀಣಾ ದಂಪತಿಗಳ ಪುತ್ರ ರೂಪೇಶ್ (15) ಮೃತ ಪಟ್ಟ ಬಾಲಕ . ಈತ ಸ್ಥಳೀಯ ಉದನೆ ಶಾಲೆಯಲ್ಲಿ 9 ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದು ಪ್ರಸ್ತುತ ಶಾಲೆಗೆ ಹೋಗುತ್ತಿರಲಿಲ್ಲ ಎನ್ನಲಾಗಿದೆ

ಇಂದು ಮಧ್ಯಾಹ್ನ ಎಕ್ಸ್ಟೆನ್ಷನ್ ಬಾಕ್ಸ್ ಗೆ ಮೊಬೈಲ್ ಚಾರ್ಜರ್ ಸಿಕ್ಕಿಸಿ ಅದರಲ್ಲಿ ಮೊಬೈಲ್ ಫೋನನ್ನು ಚಾರ್ಜರ್ನಲ್ಲಿಟ್ಟು ಬಾಲಕ ಆಡಲೆಂದು ಹೊರ ಹೋಗಿದ್ದ . ಆಟವಾಡಿ ವಾಪಸ್ಸು ಮನೆಗೆ ಬಂದು ಎಕ್ಸ್ಟೆನ್ಷನ್ ಬಾಕ್ಸ್ ನಿಂದ ಚಾರ್ಜರ್ ತೆಗೆಯುವ ವೇಳೆ ವಿದ್ಯುತ್ ಶಾಕ್ ಹೊಡೆದು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

- Advertisement -


ಈ ವೇಳೆ ಬಾಲಕನ ಚಿಕ್ಕಮ್ಮ ಹಾಗೂ ಸಹೋದರ ಮಾತ್ರ ಮನೆಯಲ್ಲಿದ್ದರು ಎಂದು ತಿಳಿದು ಬಂದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



Join Whatsapp