ದನದ ಮಾಂಸ ಸಾಗಾಟ ಆರೋಪ: ಅಪ್ರಾಪ್ತ ಮುಸ್ಲಿಂ ಬಾಲಕನ ಮೇಲೆ ಸಂಘಪರಿವಾರದಿಂದ ಹಲ್ಲೆ!

Prasthutha|

ಕೊಡಗು: ಜಿಲ್ಲೆಯ ಮಾದಾಪುರ ಎಂಬಲ್ಲಿ ಹಬ್ಬದ ಪ್ರಯುಕ್ತ 2 kg ಮಟನ್ ಮಾಂಸ ಸಾಗಿಸುತ್ತಿದ್ದ ಮುಸ್ಲಿಂ ಯುವಕನ ಮೇಲೆ ಸಂಘಪರಿವಾರದ ಗೂಂಡಾಗಳು ಹಲ್ಲೆ ಮಾಡಿದ್ದಾರೆ.

- Advertisement -

ಸಫ್ವಾನ್ (12) ಎಂಬ ಅಪ್ರಾಪ್ತ ಬಾಲಕನ ಮೇಲೆ ಸಂಘಪರಿವಾರದ ಪುಂಡರು ದನದ ಮಾಂಸ ಸಾಗಿಸುತ್ತಿದ್ದಾನೆ ಎಂದು ಆರೋಪಿಸಿ ತೀವ್ರ ದಾಳಿ ಮಾಡಿದ್ದು, ಬಸ್ಸ್ ನಲ್ಲಿ ಸಂಚರಿಸುತ್ತಿದ್ದಾಗ ಆತನನ್ನು ಎಳೆದು ಕೆಳಗೆ ಹಾಕಿ ಹಲ್ಲೆ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ SDPI ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಮತ್ತು SDPI ಕೊಡಗು ಜಿಲ್ಲೆ ಅಧ್ಯಕ್ಷರಾದ ಖಲೀಲ್ ಮಡಿಕೇರಿ ಅವರು, ಅಪ್ರಾಪ್ತ ಶಾಲಾ ಬಾಲಕನ ಮೇಲೆ ಹಲ್ಲೆ ನಡೆಸಿದ ಗೂಂಡಾಗಳನ್ನು ತಕ್ಷಣ ಬಂಧಿಸಿ ,ಕ್ರಮ ಕೈಗೊಂಡು ಮುಂದೆ ಇಂತಹ ಘಟನೆ ನಡೆಯದಂತೆ ಜಾಗೃತೆ ವಹಿಸಬೇಕು ಎಂದು ಕೊಡಗು ಪೊಲೀಸ್ ವರಿಷ್ಠರಲ್ಲಿ ಆಗ್ರಹಿಸಿದ್ದಾರೆ

- Advertisement -



Join Whatsapp