ಕರಾವಳಿ ಸೇರಿದಂತೆ ನಾಡಿನಾದ್ಯಂತ ಈದುಲ್ ಅದ್ ಹಾ ಸಂಭ್ರಮ

Prasthutha|

ಮಂಗಳೂರು: ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಮುಸ್ಲಿಮರು ಭಾನುವಾರ ಸಂಭ್ರಮ ಸಡಗರಿಂದ ಈದುಲ್ ಅದ್ ಹಾ ಹಬ್ಬವನ್ನು ಆಚರಿಸಿದರು.

- Advertisement -

ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಬೆಳಗ್ಗೆ ಈದ್ಗಾ ಮೈದಾನ, ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮ್ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ನಗರದ ಬಾವುಟಗುಡ್ಡೆ ಮಸೀದಿ, ಇಬ್ರಾಹೀಂ ಖಲೀಲ್ ಮಸೀದಿ, ಝೀನತ್ ಬಕ್ಷ್ ಮಸೀದಿ, ಬದ್ರಿಯಾ ಮಸೀದಿ ಸೇರಿದಂತೆ ವಿವಿಧ ಮಸೀದಿಗಳಲ್ಲಿ ಈದ್ ನಮಾಝ್ ನಿರ್ವಹಿಸಲಾಯಿತು.

- Advertisement -

ನಮಾಝ್ ನ ಬಳಿಕ ಜಾನುವಾರುಗಳನ್ನು ಅಲ್ಲಾಹನ ಹೆಸರಿನಲ್ಲಿ ಬಲಿಯರ್ಪಿಸಿ ಅದರ ಮಾಂಸವನ್ನು ಬಡಬಗ್ಗರಿಗೆ ದಾನ ಮಾಡುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.

ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ಕೂಡ ಈದುಲ್ ಅದ್ ಹಾ ಇಂದೇ ಆಚರಿಸಲಾಗಿದೆ.



Join Whatsapp