ಬೊಮ್ಮನಹಳ್ಳಿ ಬಾಬು ತುಮಕೂರಿನಿಂದ ಸ್ಪರ್ಧೆ

Prasthutha|

ಬೆಂಗಳೂರು: ಮೊನ್ನೆತಾನೆ ಜೆಡಿ ಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಅಟ್ಟಿಕಾ ಗೋಲ್ಡ್ ಮಾಲೀಕ ಬೊಮ್ಮನಹಳ್ಳಿ ಬಾಬು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ತುಮಕೂರು ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ದೆ ಮಾಡಲು ತೀರ್ಮಾನಿಸಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡರ ನಿರ್ದೇಶನದಂತೆ ಚುನಾವಣಾ ತಯಾರಿಯಲ್ಲಿ ತೊಡಗಿದ್ದಾರೆ.

- Advertisement -

ಅತೀ ಶೀಘ್ರದಲೇ ತುಮಕೂರಿನ ಜೆಡಿಎಸ್ ಸ್ಥಳೀಯ ಮುಖಂಡರ ಸಭೆ ನಡೆಸಿ ಪಕ್ಷ ಸಂಘಟನೆಗೆ ಮುಂದಾಗಲಾಗುವುದು. ತುಮಕೂರು ಗ್ರಾಮೀಣ ಶಾಸಕ ಗೌರಿ ಶಂಕರ್ ಸೇರಿದಂತೆ ಎಲ್ಲ ಮುಖಂಡರು ತುಮುಕೂರಿನಿಂದ ಸ್ಪರ್ದೆ ಮಾಡುವ ಕುರಿತು ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ಬೊಮ್ಮನಹಳ್ಳಿ ಬಾಬು ತಿಳಿಸಿದರು.

ಬೆಂಗಳೂರಿನಲ್ಲಿ ತಮ್ಮನ್ನು ಬೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು, ಜೆಡಿ ಎಸ್ ಪಕ್ಷ ಸ್ಥಳೀಯ ಪಕ್ಷ ವಾಗಿದ್ದು ಪ್ರಾದೇಶಿಕವಾಗಿ ಬೆಳೆಯುತ್ತಿರುವ ಪಕ್ಷವಾಗಿದೆ. ಕನ್ನಡ ನಾಡು, ನುಡಿ ಬಗ್ಗೆ ತನ್ನದೇ ಆದ ಕಾಳಜಿಯನ್ನು ಹೊಂದಿದೆ. ಈ ನೆಲದ ಮೇಲೆ ಪ್ರೀತಿ ವಿಶ್ವಾಸವನ್ನು ಹೊಂದಿರುವ ಪಕ್ಷವಾಗಿದೆ. ಮಾಜಿ ಪ್ರಧಾನಿ ದೇವೆಗೌಡರು 90 ವರ್ಷ ವಯಸ್ಸಾಗಿದ್ದರೂ ನಾಡು, ನುಡಿ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಈ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ಹೇಳಿದರು.



Join Whatsapp