ಶಿವಮೊಗ್ಗದಲ್ಲಿ ಬಸ್ಸುಗಳ ಮುಖಾಮುಖಿ : ಹಲವರಿಗೆ ಗಂಭೀರ ಗಾಯ

Prasthutha|

ಶಿವಮೊಗ್ಗ: ಶಿವಮೊಗ್ಗದ ಹೊರವಲಯ ಉಂಬ್ಳೆಬೈಲು ಸಮೀಪದಲ್ಲಿ ಕೆ.ಎಸ್ ಆರ್ ಟಿ.ಸಿ ಬಸ್ ಮತ್ತು ಖಾಸಗಿ ಬಸ್ ಮುಖಾಮುಖಿಯಾಗಿದ್ದು ಮೂವತ್ತಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

- Advertisement -

ಖಾಸಗಿ ಬಸ್ ಎನ್ ಆರ್ ಪುರ ದಿಂದ ಶಿವಮೊಗ್ಗದ ಕಡೆ ಬರುತ್ತಿದ್ದು, ಕೆ ಎಸ್ ಆರ್ ಟಿ ಸಿ ಬಸ್ ಶಿವಮೊಗ್ಗದ ಕಡೆಯಿಂದ ಕೊಪ್ಪ ಕಡೆಗೆ ತೆರಳುತ್ತಿತ್ತು. ಈ ಘಟನೆ ಉಂಬ್ಳೇಬೈಲು ಸಮೀಪ ನಡೆದಿದ್ದು,  ರಸ್ತೆ ತಿರುವು ಹೊಂದಿದ್ದು ಎರಡೂ ಕಡೆಗಳಿಂದ ವೇಗವಾಗಿ ಚಲಿಸುತ್ತಿದ್ದ ಬಸ್ ಗಳು ಆಕಸ್ಮಿಕವಾಗಿ ಎದುರಾದ ಪರಿಣಾಮ ಈ ಅಪಘಾತ ನಡೆದಿದೆ ಎನ್ನಲಾಗಿದೆ. ಮತ್ತು ಅಪಘಾತ ಸಂಜೆ ವೇಳೆಯಾದ್ದರಿಂದ ಮನೆಗೆ ಪ್ರಯಾಣಿಸುತ್ತಿದ್ದ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -



Join Whatsapp