ದೇವೇಗೌಡರ ವಿರುದ್ಧ ಹೇಳಿಕೆ: ಕೊನೆಗೂ ಕ್ಷಮೆಯಾಚಿಸಿದ ಕೆ.ಎನ್.ರಾಜಣ್ಣ

Prasthutha|

ತುಮಕೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಕೊನೆಗೂ ಕ್ಷಮೆಯಾಚಿಸಿದ್ದಾರೆ.

- Advertisement -

ದೇವೇಗೌಡರ ಬಗ್ಗೆ ನನಗೆ ಆಪಾರವಾದ ಗೌರವವಿದೆ. ಜ್ವರದ ನಡುವೆಯೂ ಬಂದು ಪ್ರಚಾರ ಮಾಡಿ, ನನಗೆ ರಾಜಕೀಯ ಪುನರ್ಜನ್ಯ ನೀಡಿದವರು. ಅವರ ಸಾವನ್ನು ನಾನು ಬಯಸುವುದಿಲ್ಲ. ಆದರೆ ಕೆಲವರು ಇದೇ ವಿಚಾರವನ್ನು ಮುಂದಿಟ್ಟುಕೊಂಡು ನನ್ನ ತೇಜೋವಧೆಗೆ ಮುಂದಾಗಿದ್ದಾರೆ. ತಳಸಮುದಾಯದಕ್ಕೆ ಸೇರಿದ ನನ್ನನ್ನು ರಾಜಕೀಯ ಅಧಿಕಾರದಿಂದ ದೂರ ಇರಿಸಲು ಈ ರೀತಿಯ ಪ್ರಯತ್ನ ನಡೆಸಿದ್ದಾರೆ ಎಂದು ರಾಜಣ್ಣ ಬೇಸರ ವ್ಯಕ್ತಪಡಿಸಿದರು.

ಇದೇ ನನ್ನ ಕೊನೆಯ ಚುನಾವಣೆ ಎಂದು ಪದೇ ಹೇಳುತ್ತಿರುವುದನ್ನು ಗಮನಿಸಿದ ಮುಂಭಾಗದಲ್ಲಿದ್ದ ಪ್ರೇಕ್ಷಕರೊಬ್ಬರು, ನಿಮಗೆ ದೇವೇಗೌಡರಿಗಿಂತ ವಯಸ್ಸಾಗಿದೆಯೇ ಸ್ವಾಮಿ ಎಂದು ಪ್ರಶ್ನಿಸಿದ ಈ ವೇಳೆ, ಅವರು ಇಬ್ಬರು, ನಾಲ್ವರ ಸಹಾಯ ಪಡೆದು ನಡೆದಾಡಿ ಚುನಾವಣೆ ನಡೆಸುತ್ತಾರೆ. ನನ್ನಿಂದ ಅದಾಗದು ಎಂದು ಹೇಳಿದೆ. ಆದರೆ ನನ್ನ ಹೇಳಿಕೆಯನ್ನು ತಿರುಚಿ ಬಿತ್ತರಿಸಲಾಗಿದೆ.ಈ ವಿಚಾರವಾಗಿ ನಾನೇ ಖುದ್ದಾಗಿ ದೇವೇಗೌಡರನ್ನು ಭೇಟಿಯಾಗಿ ನಡೆದ ವಿಷಯಗಳನ್ನು ಮನವರಿಕೆ ಮಾಡಿಕೊಡುವುದಾಗಿ ಅವರು ಸ್ಪಷ್ಟನೆ ನೀಡಿದರು.



Join Whatsapp