ಪಬ್ಲಿಕ್ ಟಿ.ವಿಯಲ್ಲಿ ಪ್ರಚೋದನೆ: ಸಿದ್ದರಾಮಯ್ಯ, ಡಿಕೆಶಿಯನ್ನು ಗುಂಡಿಕ್ಕಿ ಕೊಲ್ಲಿ ಎಂಬ ಬಹಿರಂಗ ಬೆದರಿಕೆ

Prasthutha|

►ಮುಸ್ಲಿಮ್ ಸಮುದಾಯದ ವಿರುದ್ಧ ಬೇಕಾಬಿಟ್ಟಿ ಮಾತುಗಳಿಗೆ ಅವಕಾಶ ಮಾಡಿಕೊಟ್ಟ ಪಬ್ಲಿಕ್ ಟಿವಿ..!

- Advertisement -

ಬೆಂಗಳೂರು: ಉದಯಪುರದ ಟೈಲರ್ ಹತ್ಯೆ ವಿಚಾರವಾಗಿ ಪಬ್ಲಿಕ್ ಟಿವಿಯ ಫೋನ್ ಇನ್ ಕಾರ್ಯಕ್ರಮದಲ್ಲಿ  ದಾವಣಗೆರೆಯ ವೀರಣ್ಣ ಎಂಬವನು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಗುಂಡಿಕ್ಕಿ  ಕೊಲ್ಲುವಂತೆ ಕರೆಕೊಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶ  ಕಾರಣವಾಗಿದೆ.

ಇಂತಹ ಪ್ರಚೋದನಕಾರಿ ಹೇಳಿಕೆ ನೀಡಲು ಆತನಿಗೆ ಅವಕಾಶ ಮಾಡಿಕೊಟ್ಟ ಪಬ್ಲಿಕ್ ಟಿವಿಯ ವಿರುದ್ಧವೂ ಆಕ್ಷೇಪ ವ್ಯಕ್ತವಾಗಿದೆ.

- Advertisement -

ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆಯ ಕುರಿತು ಪಬ್ಲಿಕ್ ಟಿವಿಯಲ್ಲಿ ಶುಕ್ರವಾರ ‘ಕನ್ನಯ್ಯ ಲಾಲ್ ಪ್ರಕರಣದ ಬಗ್ಗೆ ಆಕ್ರೋಶ ಹೊರ ಹಾಕಿದ ಜನರು..!’ ಎಂಬ ಶೀರ್ಷಿಕೆಯಲ್ಲಿ ನೇರಪ್ರಸಾರದ ಜನಾಭಿಪ್ರಾಯ ಕಾರ್ಯಕ್ರಮ ನಡೆಸಿತ್ತು.

ಪಬ್ಲಿಕ್ ಟಿವಿಗೆ ಕರೆ ಮಾಡಿದ್ದ ಹಲವು ಜನರು ಉದಯಪುರದ ಹತ್ಯೆಯ ವಿಚಾರವಾಗಿ ಇಡೀ ಮುಸ್ಲಿಮ್ ಸಮುದಾಯದ ವಿರುದ್ಧ ಪ್ರಚೋದನೆಯ ಮಾತುಗಳನ್ನಾಡಿದ್ದರು. ಇಬ್ಬರು ಮಾಡಿರುವ ಕೃತ್ಯವನ್ನು ಮುಸ್ಲಿಮ್ ಸಮುದಾಯದ ತಲೆಗೆ ಕಟ್ಟಿ ಮುಸ್ಲಿಮರ ವಿರುದ್ಧ ಬಾಯಿಗೆ ಬಂದಹಾಗೆ ಮಾತನಾಡಿದ್ದರು.

ಈ ಕಾರ್ಯಕ್ರಮದ ನಿರೂಪಕನಾಗಿದ್ದ ವಿವಾದಿತ ಆ್ಯಂಕರ್ ಅರುಣ್ ಬಡಿಗೇರ್, ಮುಸ್ಲಿಮ್ ಸಮುದಾಯದ ವಿರುದ್ಧದ ಮಾತುಗಳಿಗೆ ತಲೆ ಆಡಿಸುತ್ತಾ “ಓಕೆ ಓಕೆ” ಎನ್ನುತ್ತಾ ಬೆಂಬಲ ನೀಡಿದ್ದರು. ನ್ಯೂಸ್ ಚಾನಲ್ ಆ್ಯಂಕರ್ ಆಗಿದ್ದುಕೊಂಡು ಮತೀಯ ದ್ವೇಷದ ಮಾತುಗಳಿಗೆ ಒಪ್ಪಿಗೆ ಸೂಚಿಸಿರುವ ಅರುಣ್ ಬಡಿಗೇರ್ ಹಾಗೂ ಸಾಮಾಜದ ನೆಮ್ಮದಿ ಹಾಳುಮಾಡುವ ಇಂತಹ ಕಾರ್ಯಕ್ರಮ ನಡೆಸಲು ಆವಕಾಶ ಕೊಟ್ಟಿರುವ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್. ಆರ್ ರಂಗನಾಥ್ ವಿರುದ್ಧವೂ ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕ ವಲಯದಲ್ಲಿ  ಆಕ್ರೋಶ ವ್ಯಕ್ತವಾಗಿದೆ.



Join Whatsapp