ಮೈಸೂರಲ್ಲಿ ಮೋದಿ: ಪ್ರಧಾನಿ ಆಗಮನದಿಂದ ಪ್ರಮುಖ ರಸ್ತೆಗಳು ಬಂದ್, ಸಾರ್ವಜನಿಕರಿಂದ ಹಿಡಿಶಾಪ

Prasthutha|

ಮೈಸೂರು: ಪ್ರಧಾನಿ ಮೋದಿ ಸಂಚರಿಸುವ ರಸ್ತೆಯನ್ನು ಸತತ ಮೂರು ಗಂಟೆಗೂ ಹೆಚ್ಚು ಕಾಲ ಬಂದ್‌ ಮಾಡಿದ್ದರಿಂದ ನಗರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಲು ಸಾರ್ವಜನಿಕರು ಇಡೀ ನಗರವನ್ನು ಸುತ್ತಿ ಸುಸ್ತಾಗಿದ್ದಾರೆ. ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅವಕಾಶ ನೀಡದೆ ರಸ್ತೆಯನ್ನೇ ಬಂದ್‌ ಮಾಡಿದ್ದರಿಂದ, ಇಡೀ ನಗರವನ್ನು ಸುತ್ತಿ ಜನರು ಬಳಲಿ ಬೆಂಡಾಗಿದ್ದು ರಸ್ತೆ ಬಂದ್‌ಗೆ ಕಾರಣರಾದ ಮೋದಿಗೆ ಜನ ಹಿಡಿ ಶಾಪ ಹಾಕಿದ್ದಾರೆ.

- Advertisement -

ಒಂದೆರಡು ಕಾರ್ಯಕ್ರಮಕ್ಕೆ ಬಂದರೆ ಇಡೀ ನಗರದ ರಸ್ತೆಯನ್ನೇಕ್ಕೆ ಬಂದ್‌ ಮಾಡಬೇಕು ಎಂದು ಪೊಲೀಸರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ಮತ್ತು ದಿನನಿತ್ಯ ಸಂಚರಿಸುವ ರಸ್ತೆಗೆ ನಿರಂತರ ಮೂರು ಗಂಟೆಗಳ ಕಾಲ ಪ್ರವೇಶ ನಿರ್ಬಂಧಿಸಿದ್ದರಿಂದ ಜನರು ಹೈರಾಣಾಗಿದ್ದಾರೆ.



Join Whatsapp