ರಾಂಚಿ ಹತ್ಯೆಗೆ ಬಿಜೆಪಿ, ಜೆಎಂಎಂ ಪಕ್ಷಗಳು ನೇರ ಕಾರಣ: ಸಂಸದ ಅಸದುದ್ದೀನ್ ಉವೈಸಿ ಗಂಭೀರ ಆರೋಪ

Prasthutha|

ಹೈದರಾಬಾದ್: ಪ್ರವಾದಿ ಅವಹೇಳನ ಮಾಡಿದವರನ್ನು ಬಂಧಿಸುವಂತೆ ಆಗ್ರಹಿಸಿ ಜೂನ್ 10 ರಂದು ರಾಂಚಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ಇಬ್ಬರು ಅಪ್ರಾಪ್ತರ ಹತ್ಯೆಗೆ ಬಿಜೆಪಿ ಮತ್ತು ಜೆಎಂಎಂ ಪಕ್ಷಗಳು ನೇರ ಕಾರಣವೆಂದು ಸಂಸದ ಅಸದುದ್ದೀನ್ ಉವೈಸಿ ಗಂಭೀರ ಆರೋಪ ಮಾಡಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ನೂಪುರ್ ಶರ್ಮಾ ವಿರುದ್ಧ ಕ್ರಮ ಕೈಗೊಳ್ಳದ ಬಿಜೆಪಿ ಮತ್ತು ನಿರಾಯುಧ ಜನರ ಮೇಲೆ ಗುಂಡು ಹಾರಿಸಿದ ಪೊಲೀಸರ ಮೇಲೆ ಇದುವರೆಗೂ ಕ್ರಮ ಜರುಗಿಸದ ಜೆಎಂಎಂ ಪಕ್ಷಗಳು ಈ ಕೃತ್ಯಕ್ಕೆ ನೇರ ಕಾರಣ ಎಂದು ಟೀಕಿಸಿದರು.

ಪ್ರತಿಭಟನೆಯ ವೇಳೆ ನಡೆದ ಗೋಲಿಬಾರ್’ನಲ್ಲಿ ಸಾವನ್ನಪ್ಪಿದ ಮಕ್ಕಳ ಕುಟುಂಬಗಳಿಗೆ ಸರ್ಕಾರ ಸೂಕ್ತ ನೆರವು ನೀಡಬೇಕೆಂದು ಸಂಸದ ಉವೈಸಿ ತಿಳಿಸಿದ್ದಾರೆ.

- Advertisement -

ಘಟನೆಯಲ್ಲಿ ಮೃತಪಟ್ಟ ಅಪ್ರಾಪ್ತ ಮುದಾಸಿರ್ ಮತ್ತು ಸಾಹಿಲ್ ಎಂಬವರ ಕುಟುಂಬದ ಸದ್ಯಸ್ಯರನ್ನು ಸಂಸದ ಉವೈಸಿ ಭೇಟಿ ಮಾಡಿದರು.

ಮುದಸ್ಸಿರ್ ಆಲಂ ಅವರ ತಲೆಗೆ ಗುಂಡು ಹಾರಿಸಿ ಹತ್ಯೆ ನಡೆಸಲಾಗಿದ್ದು, ಪೊಲೀಸರು ಗುಂಡು ಹಾರಿಸಿದ್ದಾರೆಯೇ ಅಥವಾ ಹನುಮಾನ್ ಮಂದಿರದ ಬಳಿಯಿದ್ದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆಯೇ ಎಂಬುದು ಖಚಿತವಾಗಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.



Join Whatsapp