ಪರಿ‌‌ಷತ್ ನ ಫೈನಲ್ ಫಲಿತಾಂಶ | ಕೈ- ಕಮಲ ಸಮಬಲ‌ , ದಳಕ್ಕೆ ಏನೂ ಇಲ್ಲ

Prasthutha|

ಬೆಂಗಳೂರು: ಜೂನ್ 13 ರಂದು ನಡೆದಿದ್ದ ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರದ ಅಂತಿಮ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಎರಡು ಸ್ಥಾನ ತನ್ನದಾಗಿಸಿಕೊಂಡಿದ್ದು , ಜೆಡಿಎಸ್ ಮಾತ್ರ ಶೂನ್ಯ ಸಂಪಾದನೆ ಮಾಡಿದೆ.

- Advertisement -

ವಾಯುವ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಹನುಮಂತ ನೀರಾಣಿ ಹಾಗೂ ದಕ್ಷಿಣ ಪದವೀಧರ ಕ್ಷೇತ್ರದಿಂದ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ಗೆದ್ದು ಗದ್ದುಗೆ ಏರಿದ್ದಾರೆ. ಅದೇ ರೀತಿ ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಜಯಗಳಿಸಿದ್ದು ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಬಸವರಾಜ ಹೊರಟ್ಟಿ ಜಯಭೇರಿ ಬಾರಿಸಿದ್ದಾರೆ.

ಇನ್ನುಳಿದಂತೆ ಈ ನಾಲಕ್ಕು ಕ್ಷೇತ್ರದಲ್ಲೂ ಜೆಡಿಎಸ್ ಶೂನ್ಯ ಸ್ಥಾನ ಪಡೆದುಕೊಂಡಿದ್ದು ಪಕ್ಷದ ಭದ್ರಕೋಟೆ ಎಂದು ಬಿಂಬಿಸುತ್ತಿದ್ದ ದಕ್ಷಿಣ ಪದವೀಧರ ಕ್ಷೇತ್ರದಲ್ಲೂ ಸೋಲುಂಡು ತೀವ್ರ ಮುಖಭಂಗಕ್ಕೀಡಾಗಿದೆ.



Join Whatsapp