ನಟಿ ಸಾಯಿ ಪಲ್ಲವಿ ಹೇಳಿಕೆ ಪರ ನಿಂತ ಸ್ಯಾಂಡಲ್ ವುಡ್ ನಟಿ ರಮ್ಯಾ

Prasthutha|

ಬೆಂಗಳೂರು: ಕಾಶ್ಮೀರ ಹಿಂಸಾಚಾರ ಮತ್ತು ಗೋವಿನ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲುವುದಕ್ಕೂ ವ್ಯತ್ಯಾಸವಿಲ್ಲ ಎಂದು ಹೇಳಿರುವ ಸಾಯಿ ಪಲ್ಲವಿ ಅವರು ಈ ವಿಚಾರದಲ್ಲಿ ಅವರಿಗೆ ‘ಸ್ಯಾಂಡಲ್ವುಡ್ ’ ನಟಿ ರಮ್ಯಾ ಬೆಂಬಲ ನೀಡಿದ್ದಾರೆ.

- Advertisement -


ಈ ಕುರಿತು ಟ್ವೀಟ್ ಮಾಡಿರುವ ನಟಿ ರಮ್ಯಾ, ‘ಶೋಷಣೆಗೆ ಒಳಗಾದವರನ್ನು ರಕ್ಷಿಸಬೇಕು’. ಸತ್ಯ ನುಡಿಯುವ ಧೈರ್ಯ ತೋರಿದ್ದಕ್ಕೆ ತಮ್ಮ ಪ್ರಶಂಸೆ ಇದೆ ಎಂದು ಬರೆದುಕೊಂಡಿದ್ದಾರೆ.


ದಿ ಕಾಶ್ಮೀರ್ ಫೈಲ್ಸ್ ಚಿತ್ರವು ಕಾಶ್ಮೀರಿ ಪಂಡಿತರನ್ನು ಹೇಗೆ ಹತ್ಯೆಗೈಯ್ಯಲಾಯಿತು ಎಂದು ಹೇಳುತ್ತದೆ. ಇತ್ತೀಚೆಗೆ ದನವನ್ನು ಸಾಗಿಸುತ್ತಿದ್ದಾನೆ ಎಂದು ಒಬ್ಬ ವ್ಯಕ್ತಿಯನ್ನು ಹತ್ಯೆಗೈಯ್ಯಲಾಯಿತು ಆತ ಮುಸ್ಲಿಮನೆಂಬ ಶಂಕೆಯಿಂದ ಹತ್ಯೆ ನಡೆಯಿತು. ನಂತರ ದಾಳಿಕೋರರು ಜೈ ಶ್ರೀ ರಾಮ್ ಘೋಷಣೆ ಕೂಗಿದರು. ಕಾಶ್ಮೀರದಲ್ಲಿ ನಡೆದಿರುವುದಕ್ಕೂ ಇತ್ತೀಚೆಗೆ ನಡೆದಿರುವುದಕ್ಕೂ ವ್ಯತ್ಯಾಸವೇನಿದೆ?” ಎಂದು ಸಾಯಿ ಪಲ್ಲವಿ ಪ್ರಶ್ನಿಸಿದ್ದರು. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗೆಳು ನಡೆಯುತ್ತಿದೆ



Join Whatsapp