ಕೆಎಟಿ ಸದಸ್ಯರಾಗಿ ನಿವೃತ್ತ ಡಿಜಿಪಿ ಔರಾದ್ಕರ್ ನೇಮಕ

Prasthutha|

ಬೆಂಗಳೂರು: ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ಸದಸ್ಯರಾಗಿ ನಿವೃತ್ತ ಪೊಲೀಸ್( ಡಿಜಿಪಿ‌) ರಾಘವೇಂದ್ರ ಔರಾದ್ಕರ್​ ಅವರನ್ನು ನೇಮಕ ಮಾಡಲಾಗಿದೆ.

- Advertisement -

ರಾಘವೇಂದ್ರ ಔರಾದ್ಕರ್​ ಅವರನ್ನು ಕೆಎಟಿ ಸದಸ್ಯರಾಗಿ ಕೇಂದ್ರ ಸರ್ಕಾರ  ನೇಮಕ ಮಾಡಿರುವ ಆದೇಶಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್​ ಅಂಕಿತ ಹಾಕಿದ್ದಾರೆ.  ಕೆಎಟಿಗೆ ಮೊದಲ ಬಾರಿಗೆ ಐಪಿಎಸ್​ ಅಧಿಕಾರಿ ನೇಮಕ ಮಾಡಿದ್ದು, ಮುಂದಿನ 4 ವರ್ಷಗಳ ಕೆಎಟಿ ಸದಸ್ಯರಾಗಿ ರಾಘವೇಂದ್ರ ಔರಾದ್ಕರ್​ ಕಾರ್ಯನಿರ್ವಹಿಸಲಿದ್ದಾರೆ.

ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದು ಕೊರತೆ ನಿವಾರಣೆ ಹಾಗೂ ಪಿಂಚಣಿ ಸಚಿವಾಲಯ ರಾಷ್ಟ್ರಪತಿಗಳ ಆದೇಶದಂತೆ ರಾಘವೇಂದ್ರ ಔರಾದ್ಕರ್​ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ತಿಂಗಳಿಗೆ 2ಲಕ್ಷ 25ಸಾವಿರ ವೇತನ ನಿಗದಿ ಮಾಡಲಾಗಿದೆ.

- Advertisement -

ಕರ್ನಾಟಕ ರಾಜ್ಯ ಆಡಳಿತ ಮಂಡಳಿಯಲ್ಲಿ ಸದ್ಯ ಆರ್.ಬಿ.ಬೂದಿಹಾಳ್ ಅಧ್ಯಕ್ಷರಾಗಿದ್ದರೆ,ನ್ಯಾಯಾಂಗ ಸದಸ್ಯರಾಗಿ ನಾರಾಯಣ, ಟಿ.ನಾರಾಯಣಸ್ವಾಮಿ, ಆರ್. ಬಿ.ಸತ್ಯನಾರಾಯಣ ಸಿಂಗ್, ಆಡಳಿತ ಸದಸ್ಯರಾಗಿ ನಿವೃತ್ತ ಐಎಎಸ್ ಅಧಿಕಾರಿಗಳಾದ ಲತಾ ಕೃಷ್ಣ ರಾವ್, ಎಸ್.ಕೆ. ಪಟ್ನಾಯಕ್ , ಎನ್ .ಶಿವಶೈಲಂ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಪೈಕಿ ಸತ್ಯನಾರಾಯಣ ಸಿಂಗ್ ಕಲಬುರಗಿ ಪೀಠದಲ್ಲಿ ಮತ್ತು ನಾರಾಯಣಸ್ವಾಮಿ ಬೆಳಗಾವಿ ಪೀಠದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.



Join Whatsapp