ಕೊಡಗು: ಕರಡಿಗೋಡಿನಲ್ಲಿ ಮಿತಿಮೀರಿದ ಕಾಡಾನೆ ಹಾವಳಿ, ಅಪಾರ ಪ್ರಮಾಣದ ಕೃಷಿ ಫಸಲು ನಾಶ

Prasthutha|

ಮಡಿಕೇರಿ: ಕರಡಿಗೋಡು ಗ್ರಾಮದಲ್ಲಿ ಒಂಟಿ ಸಲಗ ಬೀಡುಬಿಟ್ಟಿದ್ದು, ಕಳೆದ ಹಲವು ತಿಂಗಳುಗಳಿಂದ ಕರಡಿಗೋಡು ಭಾಗದ ಕಾಫಿ ತೋಟಗಳಲ್ಲಿನ ಕೃಷಿ ಫಸಲು ನಾಶಗೊಳಿಸುತ್ತಿದೆ. ಬುಧವಾರವೂ ಕೂಡ ಸಲಗ ಕಾಫಿ ತೋಟದಲ್ಲಿ ದಾಂಧಲೆ ನಡೆಸಿ, ಕಾಫಿ ಗಿಡ ಹಾಗೂ ತೆಂಗಿನ ಮರ ಸೇರಿದಂತೆ ಕೃಷಿ ಫಸಲನ್ನು ನಾಶ ಮಾಡಿದೆ. ಕಾಡಾನೆ ಹಾವಳಿಯಿಂದಾಗಿ ತೋಟ ಕಾರ್ಮಿಕರು ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದೆ.

- Advertisement -

ಕೆಲವು ವರ್ಷಗಳ ಹಿಂದೆ ಈ ಭಾಗದ ಬೆಳೆಗಾರರೊಬ್ಬರನ್ನು ಬಲಿ ಪಡೆದದಿದ್ದು ಇದೇ ಕಾಡಾನೆಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಅಲ್ಲದೆ ಕೆಲವು ತಿಂಗಳ ಹಿಂದೆ ಕರಡಿಗೋಡಿನ ರೆಸಾರ್ಟ್ ಒಂದರ ಕಾವಲುಗಾರನ ಮೇಲೆ ದಾಳಿ ಮಾಡಿ ಗಂಭೀರ ಗಾಯಗಳಾಗಿತ್ತು. ಕಾಡಾನೆ ಹಾವಳಿ ಮಿತಿಮೀರಿರುವುದರಿಂದ ಸಮೀಪದಲ್ಲೇ ಸರಕಾರಿ ಶಾಲೆಯಿದ್ದು ಪೋಷಕರು ಆತಂಕದಲ್ಲಿದ್ದಾರೆ. ಪುಂಡಾನೆಯನ್ನು ಸೆರೆ ಹಿಡಿಯಬೇಕೆಂದು ಗ್ರಾ.ಪಂ ಉಪಾಧ್ಯಕ್ಷ ಮಹೇಶ್ ಸೇರಿದಂತೆ ಬೆಳೆಗಾರರು ಒತ್ತಾಯಿಸಿದ್ದಾರೆ.



Join Whatsapp