ದರ್ಗಾದಲ್ಲಿ ಅನುಭವ ಮಂಟಪದ ಕುರುಹುಗಳಿವೆ ಎಂಬುದು ಶುದ್ಧ ಸುಳ್ಳು: ಜಾಮದಾರ್

Prasthutha|

ಬೆಂಗಳೂರು: ಪೀರ್ ಪಾಷಾ ದರ್ಗಾದಲ್ಲಿ ಅನುಭವ ಮಂಟಪದ ಕುರುಹುಗಳಿವೆ ಎಂಬುದು ಶುದ್ಧ ಸುಳ್ಳು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಎಸ್.ಎಂ.ಜಾಮದಾರ್ ತಿಳಿಸಿದ್ದಾರೆ.

- Advertisement -

ಲಿಂಗಾಯತ ಮಠಾಧೀಶರ ಒಕ್ಕೂಟ, ಲಿಂಗಾಯತ ಧರ್ಮ ಮಹಾಸಭೆ, ಬಸವ ದಳ, ಜಾಗತಿಕ ಲಿಂಗಾಯತ ಮಹಾಸಭೆ, ಬಸವ ಸಮಿತಿ ಮತ್ತು ಬಸವ ಧರ್ಮ ಪ್ರತಿಷ್ಠಾನಗಳ ಪದಾಧಿಕಾರಿಗಳು ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಇದರಲ್ಲಿ ಮಾತನಾಡಿದ ಜಾಮದಾರ್, ಅನುಭವ ಮಂಟಪದ ವಿವಾದ ಇದೇ ಮೊದಲಲ್ಲ. ಬೀದರ್ ನಲ್ಲಿ ಎಂಟು ಸ್ಥಳಗಳಲ್ಲಿ ಅನುಭವ ಮಂಟಪ ಇತ್ತು ಎಂದು ಹೇಳುತ್ತಾರೆ. ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯ ಮುಖ್ಯಾಧಿಕಾರಿಯಾಗಿ 8 ವರ್ಷ ಕೆಲಸ ಮಾಡಿದ್ದರಿಂದ ಈ ಎಲ್ಲಾ ಸ್ಥಳಗಳನ್ನೂ ಪರಿಶೀಲನೆ ಮಾಡಿದ್ದೇವೆ. ಅನುಭವ ಮಂಟಪ ಎಂಬುದು ಬೇರೆಲ್ಲೂ ಇರಲಿಲ್ಲ. ಬಸವಣ್ಣನವರ ಮಹಾಮನೆಯೇ ಅನುಭವ ಮಂಟಪ ಎಂಬುದು ಪಾಟೀಲ ಪುಟ್ಟಪ್ಪ, ಎಂ.ಎಂ. ಕಲಬುರ್ಗಿ ಅವರನ್ನು ಒಳಗೊಂಡ ಸಮಿತಿ ಕೊಟ್ಟಿರುವ ವರದಿಯಲ್ಲಿದೆ. ಆದ್ದರಿಂದ ಇದನ್ನು ವಿವಾದವಾಗಿಸುವ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.



Join Whatsapp