ಬೆಳಗಾವಿಯ ಬಾಪಟ್ ಶಾಹಿ ಮಸೀದಿಯ ಸರ್ವೆ ನಡೆಸಲು ಶಾಸಕ ಅಭಯ್ ಪಾಟೀಲ್ ಆಗ್ರಹ

Prasthutha|

ಬೆಳಗಾವಿ: ಬೆಳಗಾವಿಯ ಬಾಪಟ್ ಗಲ್ಲಿಯಲ್ಲಿರುವ ಶಾಹಿ ಮಸೀದಿ ಈ ಹಿಂದೆ ಮಂದಿರವಾಗಿತ್ತು, ಆದ್ದರಿಂದ ಅದರ ಸರ್ವೆ ನಡೆಸಬೇಕು  ಎಂದು ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ಆಗ್ರಹಿಸಿದ್ದಾರೆ.

- Advertisement -

ಬೆಳಗಾವಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯ ಬಾಪಟ್ ಗಲ್ಲಿಯಲ್ಲಿರುವ ಶಾಹಿ ಮಸೀದಿ ನೂರಕ್ಕೆ ನೂರು ಮಂದಿರ. ಮಂದಿರ ಕೆಡವಿ ಮಸೀದಿ ಮಾಡಲಾಗಿದೆ ಎಂದು ಹಿರಿಯರು ಹೇಳುತ್ತಿದ್ದರು. ಹೀಗಾಗಿ ನಾನು ಖುದ್ದಾಗಿ ಹೋಗಿ ನೋಡಿದಾಗಲೂ ಸಹ ಅದು ಮೇಲ್ನೋಟಕ್ಕೆ ಮಂದಿರವೇ ಆಗಿತ್ತು ಅನಿಸುತ್ತೆ. ಅಲ್ಲಿರುವ ಕಂಬಗಳು, ಒಳಗೆ ಹೋಗುವಂತಹ ಬಾಗಿಲು, ಗರ್ಭಗುಡಿ ಬಾಗಿಲುಗಳು ಮಂದಿರದ ವಾಸ್ತು ರೀತಿ ಇದೆ ಎಂದು ತಿಳಿಸಿದ್ದಾರೆ.



Join Whatsapp