ಪಶ್ಚಿಮ ಬಂಗಾಳ: ಕಾರು, ಟ್ರ್ಯಾಕ್ಟರ್ ಡಿಕ್ಕಿ; 6 ಮಂದಿ ದಾರುಣ ಸಾವು

Prasthutha|

ಬಲರಾಮ್‌ ಪುರ: ಎಸ್‌ಯುವಿ ಕಾರು ಹಾಗೂ ಟ್ರ್ಯಾಕ್ಟರ್ ನಡುವೆ ಸಂಭವಿಸಿದ  ಭೀಕರ ಅಪಘಾತದಲ್ಲಿ 6 ಮಂದಿ ಮೃತಪಟ್ಟು, ಮೂವರು ಗಾಯಗೊಂಡಿರುವ ದುರ್ಘಟನೆ ತುಳಸಿಪುರ ಮತ್ತು ಬರ್ಹಾನಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

- Advertisement -

ಮೃತ ವ್ಯಕ್ತಿಗಳನ್ನು ಬಸಂತ್ (32), ಅವರ ಪತ್ನಿ ಅಮೃತಾ (28), ಲಕ್ಷ್ಮಣ್ (40), ವಾಡಿ (35) ಮತ್ತು ಶಾದಾಬ್ (26) ಅಂಕಿತ್ (13) ಎಂದು ಗುರುತಿಸಲಾಗಿದೆ.

ಗಾಯಗೊಂಡಿರುವ ಶಿವಪ್ರಸಾದ್ (52) ಹಾಗೂ ದುರ್ಗಾಪ್ರಸಾದ್ (26) ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಉಮೇಶ್ (13) ಎಂಬ ಬಾಲಕನ  ಸ್ಥಿತಿ ಚಿಂತಾಜನಕವಾಗಿದ್ದು,  ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

ಗಸಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮಣಪುರದಿಂದ ಭಗವಾನ್‌ಪುರಕ್ಕೆ ಮದುವೆಗೆ ತೆರಳುತ್ತಿದ್ದ ವೇಳೆ ಗನ್ವಾರಿಯಾ ಬಳಿ ಅಪಘಾತ ಸಂಭವಿಸಿದೆ ಎಂದು ಬಲರಾಮಪುರದ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಸಕ್ಸೇನಾ ತಿಳಿಸಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.



Join Whatsapp