ಸೈಕಲ್ಗೆ ಅಂಟಿಸಿದ್ದ ‘ಜೈ ಭೀಮ್’ ಟಿಪ್ಪು ಟೈಗರ್ ಸ್ಟಿಕ್ಕರ್ ವಿಚಾರಕ್ಕೆ ಎರಡು ಸಮುದಾಯದ ಯುವಕರ ನಡುವೆ ಗಲಾಟೆ, 6 ಯುವಕರಿಗೆ ಗಾಯ

Prasthutha|

ರಾಯಚೂರು: ಸೈಕಲ್‌ಗೆ “ಟಿಪ್ಪು ಟೈಗರ್..ಜೈ ಭೀಮ್” ಎಂಬ ಬೋರ್ಡ್ ಹಾಕಿದ್ದ ವಿಚಾರಕ್ಕೆ ಗಲಾಟೆ ನಡೆದ ಘಟನೆ ರಾಯಚೂರು ಜಿಲ್ಲೆ ಮಸ್ಕಿಯ ಸೋಮನಾಥ ನಗರದಲ್ಲಿ ನಡೆದಿದೆ.

- Advertisement -

ಮುಸ್ಲಿಂ ಯುವಕರು ಹಾಗೂ ನಾಯಕ ಸಮುದಾಯದ ಯುವಕರ ನಡುವೆ ಗಲಾಟೆ ನಡೆದಿದ್ದು ಘಟನೆಯಲ್ಲಿ 6 ಯುವಕರಿಗೆ ಗಾಯಗಳಾಗಿವೆ.

 ಮುಸ್ಲಿಂ ಯುವಕನೋರ್ವ ತನ್ನ ಸೈಕಲ್ ಮೇಲೆ ‘ಜೈ ಭೀಮ್’ ಸ್ಟಿಕ್ಕರ್ ಅಂಟಿಸಿದ್ದ. ಇದನ್ನು ಕಂಡ ನಾಯಕ ಸಮುದಾಯದ ಯುವಕ ಸ್ಟಿಕ್ಕರ್ ತೆಗೆಯುವಂತೆ ಒತ್ತಾಯಿಸಿ ಬೆದರಿಸಿ ಹಲ್ಲೆ ಮಾಡಿದ್ದಾನೆ.  ಈ ವೇಳೆ ಎರಡು ಸಮುದಾಯದ ಯುವಕರ ನಡುವೆ ಮಾತಿನ ಚಕಮಕಿ ಶುರುವಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಗಲಾಟೆಯಲ್ಲಿ 6 ಮಂದಿ ಯುವಕರಿಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.



Join Whatsapp