ಮೈಸೂರು | ಪಾರಂಪರಿಕ ಕಟ್ಟಡ ಕುಸಿತ: ಮೂವರಿಗೆ ಗಾಯ

Prasthutha|

ಮೈಸೂರು : ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ನಗರದ ಅಗ್ರಹಾರದ ವಾಣಿವಿಲಾಸ್ ಮಾರುಕಟ್ಟೆಯ ಪಾರಂಪರಿಕ ಕಟ್ಟಡದ ಕೆಲ ಭಾಗಗಳು ಕುಸಿದು ಬಿದ್ದಿದ್ದು, ಮೂವರಿಗೆ ಗಾಯವಾಗಿದೆ.

- Advertisement -

ಈ ಕಟ್ಟಡವು ಸುಮಾರು 95 ವರ್ಷಗಳ ಇತಿಹಾಸ ಹೊಂದಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1927ರಲ್ಲಿ ಈ ಮಾರುಕಟ್ಟೆ ಕಟ್ಟಡವನ್ನು ನಿರ್ಮಾಣ ಮಾಡಿಸಿದ್ದರು. ಸೂಕ್ತ ನಿರ್ವಹಣೆ ಇಲ್ಲದೆ ಕಟ್ಟಡದ ಕೆಲ ಭಾಗಗಳು ಕುಸಿದಿವೆ.

ಕಟ್ಟಡ ನಿರ್ವಹಣೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯು ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪಗಳು ಕೇಳಿಬಂದಿವೆ.



Join Whatsapp