ಬ್ಯಾಂಕ್ ವಂಚನೆ ಪ್ರಕರಣ | ಎಎಪಿ ಪಂಜಾಬ್ ಶಾಸಕ ಜಸ್ವಂತ್ ಸಿಂಗ್ ಗಜ್ಜನ್ ಮಜ್ರಾ ನಿವಾಸದೆ ಮೇಲೆ ಸಿಬಿಐ ದಾಳಿ

Prasthutha|

ಅಮೃತಸರ: 40 ಕೋಟಿಗೂ ಅಧಿಕ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಸಂಗ್ರೂರ್ ನ ಮೂರು ಸ್ಥಳಗಳಲ್ಲಿ ಪಂಜಾಬ್ ನ ಎಎಪಿ ಶಾಸಕ ಜಸ್ವಂತ್ ಸಿಂಗ್ ಗಜ್ಜನ್ ಮಜ್ರಾ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಸಂಗ್ರೂರ್ ಜಿಲ್ಲೆಯ ಮಲೇರ್ ಕೋಟ್ಲಾ ಪ್ರದೇಶದಲ್ಲಿ ಅಮರಗಢ ಶಾಸಕರ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಶೋಧ ನಡೆಸುತ್ತಿದ್ದು, ಇದು ಅವರ ಪೂರ್ವಜನ ನಿವಾಸವಾಗಿದೆ ಎಂದು ಅವರು ತಿಳಿಸಿದ್ದಾರೆ.

ಸದ್ಯ ಜಸ್ವಂತ್ ಸಿಂಗ್ ಗಜ್ಜನ್ ಮಜ್ರಾ ವಿರುದ್ಧ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.



Join Whatsapp