ಬನಾರಸ್ ಹಿಂದೂ ವಿವಿಯಲ್ಲಿ ಇಫ್ತಾರ್ ಕೂಟ: ತುಷ್ಟೀಕರಣ ಎಂದು ABVP ಪ್ರತಿಭಟನೆ

Prasthutha|

ಲಕ್ನೋ: ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ ಇಫ್ತಾರ್ ಕೂಟವನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಉಪಕುಲಪತಿ ನಿವಾಸದ ಎದುರು ಹನುಮಾನ್ ಚಾಲೀಸಾ ಪಠಿಸಿ ಪ್ರತಿಭಟನೆ ನಡೆಸಿದೆ.

- Advertisement -

ಮಾತ್ರವಲ್ಲ ಉಪ ಕುಲಪತಿಗಳು ಮುಸ್ಲಿಮ್ ತುಷ್ಟೀಕರಣ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ವಿದ್ಯಾರ್ಥಿ ಮುಖಂಡನೋರ್ವ, ಇದೇ ಮೊದಲ ಬಾರಿಗೆ ವಿಶ್ವವಿದ್ಯಾನಿಲಯದಲ್ಲಿ ಇಫ್ತಾರ್ ಕೂಟವನ್ನು ಅಧಿಕೃತವಾಗಿ ಆಯೋಜಿಸಲಾಗಿದೆ. ಎಲ್ಲಾ ವೆಚ್ಚವನ್ನು ವಿಶ್ವವಿದ್ಯಾಲಯವು ಭರಿಸುತ್ತಿದೆ. ನಾವು ಅಧಿಕೃತವಾಗಿ ಇಫ್ತಾರ್ ಪಾರ್ಟಿಗಳನ್ನು ಆಯೋಜಿಸಲು ನಾವು ಅನುಮತಿಸುವುದಿಲ್ಲ” ಎಂದು ತಿಳಿಸಿದ್ದಾರೆ.

- Advertisement -

ಇಫ್ತಾರ್ ವಿರುದ್ಧ ಪ್ರತಿಭಟಿಸಿದ ಎಬಿವಿಪಿ ನಡೆಗೆ ತಿರುಗೇಟು ನೀಡಿದ ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡುವ ಪ್ರಯತ್ನವನ್ನು ಆಡಳಿತ ಮಂಡಳಿ ಖಂಡಿಸುತ್ತದೆ. ಇಫ್ತಾರ್ ಕೂಟದೊಂದಿಗೆ ರಂಝಾನ್ ಸಮಯದಲ್ಲಿ ಉಪವಾಸವನ್ನು ಮುರಿಯುವುದು ಇಲ್ಲಿ ಪಾಲಿಸಬೇಕಾದ ಸಂಪ್ರದಾಯವಾಗಿದೆ ಎಂದು ಅದು ಘೋಷಿಸಿದೆ.

ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ವಿಶ್ವವಿದ್ಯಾನಿಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಚಂದ್ರಶೇಖರ್ ಗ್ರೆವಾಲ್, 2 ವಿಷಯಗಳ ಬಗ್ಗೆ ಯಾವುದೇ ಗೊಂದಲ ಅಥವಾ ತಪ್ಪು ಮಾಹಿತಿ ಇರಬಾರದು. ಒಂದು ಇಫ್ತಾರ್ ಅನ್ನು ಉಪಕುಲಪತಿ ಪ್ರೊ. ಸುಧೀರ್ ಕೆ. ಜೈನ್ ಆಯೋಜಿಸಿಲ್ಲ, ಬದಲಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅವರನ್ನು ಆಹ್ವಾನಿಸಿದ್ದಾರೆ. ಅವರು BHU ಮುಖ್ಯಸ್ಥರಾಗಿ ಭಾಗವಹಿಸಿದ್ದಾರೆ. ಎರಡನೇಯದಾಗಿ ಇಫ್ತಾರ್ ಆಯೋಜಿಸುವ ಸಂಪ್ರದಾಯವು 2 ದಶಕಗಳಷ್ಟು ಹಳೆಯದ್ದಾಗಿದೆ ಎಂದು ತಿಳಿಸಿದ್ದಾರೆ.

“ವಿದ್ಯಾರ್ಥಿಗಳ ಆಹ್ವಾನದ ಮೇರೆಗೆ” ಉಪಕುಲಪತಿ ಪ್ರೊಫೆಸರ್ ಸುಧೀರ್ ಕೆ ಜೈನ್ ಇಫ್ತಾರ್‌ನಲ್ಲಿ ಭಾಗವಹಿಸಿದ್ದರು ಎಂದು ವಿಶ್ವವಿದ್ಯಾಲಯದ ಮೂಲಗಳಿಂದ ತಿಳಿದು ಬಂದಿವೆ.

“BHU ನಲ್ಲಿ ಇಫ್ತಾರ್ ಆಯೋಜಿಸುವ ಸಂಪ್ರದಾಯವು ಎರಡು ದಶಕಗಳಿಗಿಂತಲೂ ಹಿಂದಿನದು. ಈ ಇಫ್ತಾರ್‌ಗಳಲ್ಲಿ BHU ಭ್ರಾತೃತ್ವದ ಮುಖ್ಯಸ್ಥರ ಸಾಮರ್ಥ್ಯದಲ್ಲಿ ನಂತರದ ಉಪಕುಲಪತಿಗಳು ಭಾಗವಹಿಸಿದ್ದರು. ಕೋವಿಡ್ ಹಿನ್ನೆಲೆಯಿಂದಾಗಿ ಕಳೆದ ಎರಡು ವರ್ಷಗಳಿಂದ ಇಫ್ತಾರ್ ಆಯೋಜಿಸಲಾಗಲಿಲ್ಲ ಎಂದು ಹೇಳಿಕೆಯಲ್ಲಿ ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ವಿಶ್ವವಿದ್ಯಾನಿಲಯದ ಮುಖ್ಯ ಪ್ರೊಕ್ಟರ್ ಭುವನ್ ಚಂದಾ ಕಪ್ರಿ ಮಾತನಾಡಿ, ಹಲವು ವಿಶ್ವವಿದ್ಯಾಲಯದಲ್ಲಿ ಇಂತಹ ಇಫ್ತಾರ್ ಕೂಟಗಳು ರೂಢಿಯಲ್ಲಿವೆ ಎಂದು ತಿಳಿಸಿದ್ದಾರೆ.

“ಯಾವುದೇ ಅಧಿಕೃತ ಆಚರಣೆಗಳನ್ನು ಮಾಡಲಾಗಿಲ್ಲ. ಯಾವುದೇ ಕಾಲೇಜು ಅಧಿಕಾರಿಗಳು ಇಫ್ತಾರ್ ಕೂಟಕ್ಕೆ ಸೇರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿ ಕೂಡ ಕೂಟಕ್ಕೆ ಸೇರಿದ್ದಾರೆ” ಎಂದು ಭುವನ್ ಚಂದಾ ಕಪ್ರಿ ತಿಳಿಸಿದ್ದಾರೆ.



Join Whatsapp