ಸರ್ಕಾರ ಜನರ ಬದುಕನ್ನು ಕಟ್ಟಬೇಕೇ ಹೊರತು, ಕಸಿದುಕೊಳ್ಳಬಾರದು: ಎಚ್‌.ವಿಶ್ವನಾಥ್‌

Prasthutha|

ಮೈಸೂರು: ‘ರಾಜ್ಯದ ಆಡಳಿತವನ್ನು ಕೆಲವು ಸಂವಿಧಾನೇತರ ಶಕ್ತಿಗಳು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವುದು ದುರದೃಷ್ಟಕರ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ರಾಜ್ಯ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಬುಲ್ಡೋಜರ್ ಮಾದರಿ ಅನುಸರಿಸುವುದು ಸರಿಯಲ್ಲ. ಸರ್ಕಾರ ಜನರ ಬದುಕನ್ನು ಕಟ್ಟಬೇಕೇ ಹೊರತು, ಬದುಕನ್ನು ಕಸಿದುಕೊಳ್ಳಬಾರದು’ ಎಂದು ಹೇಳಿದರು.

 ‘ಯಾವನ್ರೀ ಅವ ಪ್ರಮೋದ್ ಮುತಾಲಿಕ್? ಪಂಚಾಯಿತಿ ಸದಸ್ಯ ಅಥವಾ ಮುನ್ಸಿಪಾಲಿಟಿ ಸದಸ್ಯನಾಗಿ ಕೆಲಸ ಮಾಡಿದ ಅನುಭವ ಇದೆಯಾ? ಸರ್ಕಾರಕ್ಕೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಆಗಲ್ಲ ಅಂದರೆ ಏನರ್ಥ? ರಾಜ್ಯದಲ್ಲಿ ಮುತಾಲಿಕ್‌ ಸರ್ಕಾರ ಇದೆಯಾ? ಆರ್‌ಎಸ್‌ಎಸ್‌ ಸರ್ಕಾರ ಇದೆಯಾ? ಅಂಥವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದೆ ದೊಡ್ಡ ಬೆಲೆ ತೆರಬೇಕಾಗುತ್ತದೆ’ ಎಂದು ಎಚ್ಚರಿಸಿದರು.



Join Whatsapp