ಮಂಗಳೂರು | ನಗರದ ರಸ್ತೆಯ ಮಧ್ಯಭಾಗದಲ್ಲೇ ಸಂಘಪರಿವಾರದ ಕೇಸರಿಧ್ವಜ ಪ್ರತ್ಯಕ್ಷ : ಶಾಂತಿ ಕದಡುವ ಯತ್ನ

Prasthutha|

ಮಂಗಳೂರು: ನಗರದ ಕಂಕನಾಡಿಯ ರಸ್ತೆ ಮಧ್ಯೆ ಇರುವ ಸಣ್ಣ ವೃತ್ತವೊಂದಕ್ಕೆ ಸಂಘಪರಿವಾರದ ಕಿಡಿಗೇಡಿಗಳು ರಾತ್ರೋ ರಾತ್ರಿ ಕೇಸರಿ ಧ್ವಜವನ್ನು ಇಟ್ಟು ಶಾಂತಿ ಕದಡುವ ಪ್ರಯತ್ನ ನಡೆದಿದೆ.

- Advertisement -


ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಸಂಘಪರಿವಾರದವರು ಕೇಸರಿ ಧ್ವಜವನ್ನು ಇಟ್ಟು ಸಂಘರ್ಷದ ವಾತಾವರಣ ಸೃಷ್ಟಿಸಲು ಯತ್ನ ನಡೆಯುತ್ತಿರುವುದು ಮುಂದುವರಿದಿದೆ.


ಈ ಬಗ್ಗೆ ಕಂಕನಾಡಿ ಪ್ರದೇಶದ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದು, , ಕೇಸರಿ ಧ್ವಜವನ್ನು ಇಡುವ ಮೂಲಕ ಸಂಘಪರಿವಾರದವರು ಗಲಭೆಯನ್ನು ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಪೊಲೀಸರು ಹಾಗೂ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಈ ಧ್ವಜವನ್ನು ಕಿತ್ತು ಹಾಕಿ, ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.



Join Whatsapp