ವ್ಯಕ್ತಿ ಪೂಜೆ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ: ಪ್ರಿಯಾಂಕ್ ಖರ್ಗೆ

Prasthutha|

ಬಳ್ಳಾರಿ: ‘ರಾಜಕಾರಣಿಗೆ ಜೈಕಾರ, ಸನ್ಮಾನ, ಮೆರವಣಿಗೆ ಮಾಡುವುದರಿಂದ ಆತ ಸರ್ವಾಧಿಕಾರಿ ಧೋರಣೆ ತಾಳುತ್ತಾನೆ. ವ್ಯಕ್ತಿ ಪೂಜೆ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ’ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

- Advertisement -

ಕಮಲಾಪುರ ತಾಲೂಕಿನ ಡೊಂಗರಗಾಂವ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, 2ನೇ ಮಹಾಯುದ್ಧದ ನಂತರ ಭಾರತ ಸೇರಿದಂತೆ ಸ್ವಾತಂತ್ರ್ಯಗೊಂಡ 35 ದೇಶಗಳು ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿದ್ದವು. 75 ವರ್ಷಗಳ ನಂತರ 34 ದೇಶಗಳಲ್ಲಿ ನಿರಂಕುಶ ಪ್ರಭುತ್ವ, ಮಿಲಿಟರಿ ಆಡಳಿತ ಇನ್ನು ಕೆಲವು ಬೇರೆ ದೇಶಗಳಲ್ಲಿ ವಿಲೀನಗೊಂಡಿವೆ. ಭಾರತದಲ್ಲಿ ಮಾತ್ರ ಪ್ರಜಾಪ್ರಭುತ್ವ ಉಳಿದುಕೊಂಡಿದೆ. ಇದಕ್ಕೆ ಕಾರಣ ಅಂಬೇಡ್ಕರ್ ಅವರ ಸಂವಿಧಾನ ಎಂದು ಹೇಳಿದರು.



Join Whatsapp