ನೆರೆಹೊರೆಯವರೇ ಬೆಂಕಿ ಹಚ್ಚಿ, ದಾಳಿ ನಡೆಸಿದರು | ಗಲಭೆಯ ಭಯಾನಕತೆಯನ್ನು ಬಿಚ್ಚಿಟ್ಟ ಸಂತ್ರಸ್ತ ಮಹಿಳೆ

Prasthutha|

ಖಾರ್ಗೋನ್: ಇತ್ತೀಚೆಗೆ ಮಧ್ಯಪ್ರದೇಶದ ಖಾರ್ಗೋನ್ ನಲ್ಲಿ ನಡೆದ ಭೀಕರ ಗಲಭೆಯ ಭಯಾನಕತೆಯನ್ನು ಸಂತ್ರಸ್ತೆ ಮಹಿಳೆ ಸಲ್ಮಾ ಬಿ ಬಿಚ್ಚಿಟ್ಟಿದ್ದು, ನೆರೆಹೊರೆಯವರೇ ನಮ್ಮ ನಿವಾಸಕ್ಕೆ ಬೆಂಕಿ ಹಚ್ಚಿ, ದಾಳಿ ನಡೆಸಿದರು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಂತ್ರಸ್ತೆ, ನೆರೆಹೊರೆ ಮತ್ತು ನಮ್ಮ ಪರಿಚಯದ ಜನರೇ ನಮ್ಮ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಿದ್ದಾರೆ. ಈ ಸಂದರ್ಭದಲ್ಲಿ ಮುಸ್ಲಿಮರನ್ನೇ ಗುರಿಯಾಗಿಸಿ ಹಿಂಸಾಚಾರ ನಡೆಸಲಾಗಿದ್ದು, ಹಿಂದೂಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ.

ಇದರಿಂದಾಗಿ ಇನ್ನು ಮುಂದಕ್ಕೆ ಈ ಪ್ರದೇಶದಲ್ಲಿ ನೆಲೆಸಲು ಭಯವಾಗುತ್ತಿದೆ. ಆದ್ದರಿಂದ ಈ ಪ್ರದೇಶವನ್ನು ತೊರೆಯುವುದಾಗಿ ತಿಳಿಸಿದ ಸಂತ್ರಸ್ತೆ ಸಲ್ಮಾ ಬಿ, ಸಂಬಂಧಿಕರು ಇರುವ ಕಡೆಗೆ ತೆರಳುವುದಾಗಿ ತಿಳಿಸಿದ್ದಾರೆ.

- Advertisement -

ಮಧ್ಯಪ್ರದೇಶದ ಖಾರ್ಗೂನ್ ಎಂಬಲ್ಲಿನ ಸಂಜಯ್ ನಗರದ ನಿವಾಸಿಯಾದ ಸಲ್ಮಾ ಬಿ ಅವರು 3 ವರ್ಷಗಳ ಹಿಂದೆ ತನ್ನ ಪತಿಯನ್ನು ಕಳೆದುಕೊಂಡಿದ್ದರು ಮತ್ತು ಮೂವರು ಮಕ್ಕಳೊಂದಿಗೆ ಜೀವಿಸುತ್ತಿದ್ದರು.

ಗಲಭೆ ಪೀಡಿತ ಸಂಜಯ್ ನಗರದಲ್ಲಿ ಸಲ್ಮಾ ಬಿ ಅವರ ಮನೆ ಸೇರಿದಂತೆ ಕನಿಷ್ಠ 5 ಮನೆಗಳನ್ನು ಸುಟ್ಟು ಹಾಕಲಾಗಿತ್ತು.
ಶಾಂತಿಭಂಜಕರ ನಡೆಗೆ ನೆಟ್ಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.



Join Whatsapp